ಅರ್ಧಶತಕದತ್ತ ಗೀತರಚನೆಕಾರ ಶಿವನಂಜೇಗೌಡ

ಗೀತರಚನೆಕಾರನೊಬ್ಬನಿಗೆ ತನ್ನ ಐವತ್ತನೇ ಗೀತೆ ಬರೆಯುವುದೆಂದರೆ ಅದೊಂದು ದೊಡ್ಡ ಸಂಭ್ರಮ. ಇದೀಗ ಅದೇ ಸಂಭ್ರಮದಲ್ಲಿದ್ದಾರೆ ಕನ್ನಡ ಚಿತ್ರಗಳ ಗೀತರಚನೆಕಾರರಾದ ಶಿವನಂಜೇಗೌಡರು. ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ನಟಿಸುತ್ತಿರುವ ಶ್ರೀಮತಿ ಚಿತ್ರಕ್ಕೆ ಗೌಡರು ಬರೆಯುತ್ತಿರುವ ಹಾಡು ಐವತ್ತನೆಯದು.

ಗ್ರಾಮೀಣ ಹಿನ್ನಲೆಯಿಂದ ಬಂದು ಹೋಟೆಲ್ ಕ್ಲೀನರ್ ಆಗಿದ್ದುಕೊಂಡೇ ಪದವಿ ಪಡೆದು ಬಿಇಎಲ್‌ನಲ್ಲಿ ಅವರು ಕೆಲಸಕ್ಕೆ ಸೇರಿಕೊಂಡರು. ಕೆಲಸದ ಜೊತೆಗೆ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಬೆಳೆಸಿಕೊಂಡರು. ನಂತರ ಧಾರಾವಾಹಿ, ಸಿನಿಮಾ ಅಂತ ಬಂದವರು ನಡುವೆ ಸಾಹಿತ್ಯದ ಗೀಳನ್ನು ಸಹ ಗೌಡರು ಬೆಳೆಸಿಕೊಂಡರು.

ಸೀತಾರಾಮ್ ಕಾರಂತರ ಯಾಹೂ ಚಿತ್ರದಲ್ಲಿ ಹಸಿರಸಿರಿ ಹಾಡು ಬರೆಯುವುದರ ಮೂಲಕ, ಪಲ್ಲಕ್ಕಿ, ಬಿರುಗಾಳಿ, ನಂದ, ರಾವಣ ಮುಂತಾದ ಚಿತ್ರಗಳು ಸೇರಿದಂತೆ 49 ಹಾಡುಗಳನ್ನ ಬರೆದಿದ್ದಾರೆ. ಅವರ ಬತ್ತಳಿಕೆಯಲ್ಲಿ ಇನ್ನೂ 200 ಹಾಡುಗಳು ರೆಡಿ ಇವೆಯಂತೆ.

ವೆಬ್ದುನಿಯಾವನ್ನು ಓದಿ