ಉಪೇಂದ್ರ ರಾಜಕೀಯದಿಂದ ದೂರ ದೂರ ?

ಗುರುವಾರ, 6 ಫೆಬ್ರವರಿ 2014 (10:03 IST)
PR
ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಸಂಗತಿಗೆ ಈಗೊಂದು ಸ್ಪಷ್ಟ ರೂಪ ಸಿಕ್ಕಿದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ನಟಿ ರಮ್ಯ , ರಕ್ಷಿತಾ ಮತ್ತು ಉಪೇಂದ್ರ ಈ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುದ್ದಿಯಲ್ಲಿ ಈಗ ಮಾರ್ಪಾಟು ಮಾಡಿಕೊಳ್ಳ ಬೇಕಿದೆ. ಅನದರೆ ಮ್ಯಾಚ್ ಗೆ ಮುಂಚೆನೇ ಒಂದು ವಿಕೆಟ್ ಹೊರ ಬಂದಿದೆ ಆಟದಿಂದ. ನಟ ಉಪೇಂದ್ರ ಅವರು ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಇತ್ತು. ಆದರೆ ಅದನ್ನು ಅವರು ಅಲ್ಲಗಳೆದಿದ್ದಾರೆ. ಅವರು ಯಾವುದೇ ಎಲೆಕ್ಷನ್ ನಲ್ಲೂ ಭಾಗವಹಿಸುವ ಸಾಧ್ಯತೆ ಕಡಿಮೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ನನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅನೇಕ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ಮಾಡಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗಿಲ್ಲ. ನಾನು ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಂಡಿಲ್ಲ. ಆದ್ದರಿಂದ ಇಂತಹ ಯೋಜನೆಗೆ ಆದ್ಯತೆ ನೀಡುವುದಿಲ್ಲ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ನನಗೆ ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಉದ್ದೇಶ ಇಲ್ಲ ಎನ್ನುವುದನ್ನು ಅವರು ತಿಳಿಸಿದ್ದಾರೆ.

ನನಗೆ ರಾಜಕೀಯಕ್ಕಿಂತ ನಟನಾಗಿ ಇರುವುದಕ್ಕೆ ಹೆಚ್ಚು ಆದ್ಯತೆ ಇದೆ ಯಾಕೆಂದರೆ ಚಿತ್ರಗಳು ನನ್ನ ಸೇವೆಯನ್ನು ನಿರೀಕ್ಷಿಸುತ್ತಿದೆ ಎನ್ನುವ ಸಂಗತಿಯನ್ನು ಅವರು ಇತ್ತಿಚೆಗೆ ನಡೆದ ಟೀವಿ ಸಂದರ್ಶನದಲ್ಲಿ ತಿಳಿಸಿದ್ದಾರೆ.ಸದ್ಯಕ್ಕೆ ಉಪೇಂದ್ರ ನೋ ಪಾಲಿಟಿಕ್ಸ್ !

ವೆಬ್ದುನಿಯಾವನ್ನು ಓದಿ