ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಪಿ. ಶೇಷಾದ್ರಿ ನಿರ್ದೇಶನದ 'ಭಾರತ್ ಸ್ಟೋರ್ಸ್' ಚಿತ್ರ ಆಯ್ಕೆಯಾಗಿದೆ. ಪ್ರತಿವರ್ಷ ನವೆಂಬರ್ ನಲ್ಲಿ ನಡೆಯುವ 'ಪನೋರಮ' ಅಂತಾರಾಷ್ಟ್ರೀಯ ಸಿನಿಮಾ ಹಬ್ಬದ ಸಂಭ್ರಮ ದಲ್ಲಿ ದೇಶ, ವಿಶೇಷಗಳ ಸಿನಿಮಾಗಳನ್ನು ಮನಸಾರೆ ಅನುಭವಿಸುವ ಸದವಕಾಶ. ಬಸಂತ್ಕುಮಾರ್ ಪಾಟೀಲ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಮನ್ನಣೆ ಸಿಕ್ಕಿದೆ. ನಶಿಸುತ್ತಿರುವ ದಿನಸಿ ಅಂಗಡಿಗಳು, ಅಬ್ಬರಿಸುತ್ತಿರುವ ಮಲ್ಟಿಫ್ಲೆಕ್ಸ್ ನಡುವಿನ ತಿಕ್ಕಾಟ ವ್ಯಾಪಾರ, ಮಾನವೀಯ ಮೌಲ್ಯಗಳ ಅಡಿಯಲ್ಲಿ ಈ ಚಿತ್ರ ಸಿದ್ಧವಾಗಿದೆ. ಹಿಂದಿ, ಇಂಗ್ಲಿಷ್, ಮರಾಠಿ, ಬಂಗಾಳಿ, ಮಲೆಯಾಳಂ, ಒರಿಯಾ, ತಮಿಳು ಮುಂತಾದ ಭಾಷೆಗಳ ಹತ್ತಾರು ಚಿತ್ರಗಳು ಚಿತ್ರೋತ್ಸವಕ್ಕೆ ಆಯ್ಕೆಯಾಗಿವೆ. ಕನ್ನಡ ಚಿತ್ರವೂ ಸೇರ್ಪಡೆಯಾಗಿರುವುದೇ ಅತ್ಯಂತ ಖುಷಿಯ ಸಂಗತಿ. ಪನೋರಮದಂಥ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಕನ್ನಡ ಚಿತ್ರ ಆಯ್ಕೆಯಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ನಿರ್ಮಾಪಕ ಬಸಂತ್ಕುಮಾರ್ ಪಾಟೀಲ್ ಸೇರಿದಂತೆ ಇಡೀ ತಂಡಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಒಳ್ಳೆಯ ಚಿತ್ರಗಳಿಗೆ ಸಾವಿಲ್ಲ ಎಂಬುದಕ್ಕೆ ನಮ್ಮ ಭಾರತ್ ಸ್ಟೋರ್ಸ್ ಚಿತ್ರವೇ ಸಾಕ್ಷಿ' ಎಂದು ವಿನಮ್ರವಾಗಿ ಹೇಳಿದ್ದಾರೆ ನಿರ್ದೇಶಕ ಪಿ. ಶೇಷಾದ್ರಿ. ನಿಜ ಒಳ್ಳೆಯ ಚಿತ್ರಗಳಿಗೆ ಎಂದಿಗೂ ಸಾವಿಲ್ಲ. ಅದು ನಿರಂತರವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇರುತ್ತದೆ.