ಕಲಿಯುಗದಲ್ಲಿ ರಿಶಿಕುಮಾರ ಸ್ವಾಮಿ ಖಳನಟ?

ಭಾನುವಾರ, 22 ಡಿಸೆಂಬರ್ 2013 (14:38 IST)
PR
ಕಲಿಯುಗ ಚಿತ್ರದಲ್ಲಿ ಸ್ವಾಮಿ ರಿಶಿಕುಮಾರ್ ನಟಿಸುತ್ತಾರೆ ಅನ್ನುವ ಸುದ್ದಿ ಓಡಾಡುತ್ತಿತ್ತು. ಆದರೆ ಈವರೆಗೂ ಚಿತ್ರ ಸೆಟ್ಟೇರಿರಲಿಲ್ಲ. ಅಂತೂ ಇಂತೂ ಈಗ ಚಿತ್ರ ತನ್ನ ಕೆಲಸ ಆರಂಭಿಸಿದೆ. ಈ ಚಿತ್ರದಲ್ಲಿ ರಿಶಿಕುಮಾರ್ ಅವರದ್ದು ವಿಲನ್ ಪಾತ್ರ. ಅವರ ಬಗ್ಗೆ ಭಕ್ತರಿಗೆ ಎದ್ದಿದ್ದ ಅಸಮಧಾನ ದೂರ ಮಾಡಲು ರಿಶಿಕುಮಾರ ಸ್ವಾಮಿ ತಾನು ಹಿರಿಯ ಅದರಲ್ಲೂ ತಾನು ಭಕ್ತಿಯಿಂದ ಪೂಜಿಸುವ ಸ್ವಾಮಿಗಳ ಅನುಮತಿ ಪಡೆದು ನಟಿಸುತ್ತೇನೆ ಎಂದು ಹೇಳಿದ್ದರು. ಈಗ ಮತ್ತೊಂದು ಸಂಗತಿ ಎಂದರೆ ಈ ಚಿತ್ರದಲ್ಲಿ ಹಿಂದಿ ನಟ ಮೋಹಿತ್ ಮಿಶ್ರ ರಿಶಿ ಕುಮಾರ್ ಪಾತ್ರ ಮಾಡುತ್ತಿದ್ದಾರೆ.

ಗೌರೀ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಕಲಿಯುಗ ಚಿತ್ರದ ಚಿತ್ರೀಕರಣವುಇದೇ 13ರಂದು ವಿಜಯನಗರ 2ನೇ ಹಂತದಲ್ಲಿ ಶ್ರೀ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಶುರುವಾಯಿತು.ನಿರ್ದೇಶಕ ಚಲಪತಿ ನೇತೃತ್ವದ ಈ ಚಿತ್ರದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಮುಂದುವರೆಯಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆಅಭಿನಂದನ್ ಶ್ರೀಧರ್ ಸಂಭಾಷಣೆ, ಮನೋಹರ್ ಛಾಯಾಗ್ರಹಣ, ಶಿವಸಂತೋಷ್ ಸಂಗೀತ,ವಿನೋದ್ ರಾವ್, ಸತೀಶ್ ಕಲೆ, ಮಾಸ್ ಮಾದ ಸಾಹಸ, ಮನು ನೃತ್ಯ ಚಿತ್ರಕ್ಕಿದೆ. ಪ್ರತೀತ್ ಅಕ್ಕಿ, ಪ್ರಿಯಾಂಕ ಮಲ್ನಾಡ್, ಮೋಹಿತ್ ಮಿಶ್ರ, ಓಂಪ್ರಕಾಶ್ ರಾವ್,ರವಿ, ಕಿಂಗ್ ಮೋಹನ್, ಹರೀಶ್ ರಾಯ್ ಮುಂತಾದವ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ .

ವೆಬ್ದುನಿಯಾವನ್ನು ಓದಿ