ಕಿಚ್ಚ ಸುದೀಪ್ ಹೊಸ ಪುಸ್ತಕವೊಂದನ್ನು ಬರೆಯುತ್ತಿದ್ದಾರೆ.. ಏನಿದೆ ಅದ್ರಲ್ಲಿ ಗೊತ್ತಾ?
ಗುರುವಾರ, 28 ನವೆಂಬರ್ 2013 (12:35 IST)
PR
PR
ಕೆಲವರಿಗೆ ಸದಾ ತಮ್ಮನ್ನು ಹೊಸ ಸಂಗತಿಗಳಲ್ಲಿ ತೊಡಗಿಸಿಕೊಳ್ಳ ಬೇಕು ಎನ್ನುವ ಆಸೆ ಇರುತ್ತದೆ. ಅದಕ್ಕೆ ತಕ್ಕಂತೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ನಟ ಮತ್ತು ನಿರ್ದೇಶಕ ಕಿಚ್ಚ ಸುದೀಪ್ ಈ ಟೈಪ್ ವ್ಯಕ್ತಿತ್ವದವರು. ಸ್ಯಾಂಡಲ್ ವುಡ್ ಮಾತ್ರವಲ್ಲ ದಕ್ಷಿಣದ ವುಡ್ ಗಳು ಮತ್ತು ಬಾಲಿವುಡ್ ನಲ್ಲೂ ತಮ್ಮ ಪ್ರತಿಭೆ ತೋರಿಸಿರುವ ಕಿಚ್ಚ ಸುದೀಪ ನಟರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಆದರೂ ಅದೇ ಜಾಗದಲ್ಲಿ ಕೂರದೆ ಆ ಬಳಿಕ ಆಕ್ಷನ್ ಕಟ್ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಿದರು.
ಅಲ್ಲಿ ಗೆದ್ದ ನಂತರ ಬೇರೆ ಭಾಷೆಗಳ ಕಡೆಗೆ ಹೊರಟ ಸುದೀಪ್ ಅಲ್ಲಿನವರಿಗೂ ಇಷ್ಟ ವಾದರು. ಇದರ ನಡುವೆ ರಿಯಾಲಿಟಿ ಶೋಗಳಲ್ಲಿ ಒಳ್ಳೆಯ ಆಂಕರ್ ಎನ್ನುವ ಹೆಸರು ಗಳಿಸಿ ಜನಮನ ಗೆದ್ದರು. ಅಷ್ಟೇ ಅಲ್ಲದೇ ಮನೆ ಸಂಸಾರವನ್ನು ನಿರ್ಲಕ್ಷಿಸದೇ ಪತ್ನಿ ಪ್ರಿಯಾ ಹಾಗೂ ಮಗಳಿಗೆ ಆರಾಮದಾಯಕ ವಾತಾವರಣ ಕಲ್ಪಿಸಿ ತಾನು ಉತ್ತಮ ಗೃಹಸ್ಥ ಎಂದು ನಿರೂಪಿಸಿದರು.ಈಗ ಕಿಚ್ಚ ಅವರ ಹೊಸ ರೂಪ ಕಾಣ ಸಿಗುತ್ತಿದೆ. ಅವರೀಗ ತಮ್ಮ ಗಮನ ಬರವಣಿಗೆಯತ್ತ ಕೇಂದ್ರೀಕರಿಸಿದ್ದಾರೆ.
ಅವರೊಂದು ಬುಕ್ ಬರೆಯೋಕೆ ಅರಂಭ ಮಾಡಿದ್ದಾರೆ. ಸುದೀಪ್ ಯವಾಗ ವಿರಾಮ ಸಿಕ್ಕರೂ ತಪ್ಪದೇ ಬರವಣಿಯ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರಂತೆ ತಮ್ಮನ್ನು!ಅವರು ಬರೆಯುವುದು ಫಿಲಾಸಫಿ ಇಲ್ಲವೇ ಬಯೋಗ್ರಫಿ ಅಲ್ಲ ಓದುಗರ ಮುಖದಲ್ಲಿ ನಗು ಬರುವಂತಹ ಲೈಟ್ ಸಂಗತಿಗಳನ್ನು ಬರೆಯುವುದಕ್ಕೆ ಗಮನ ನೀಡುತ್ತಿದ್ದಾರಂತೆ. ಇಂತಹ ಮನೋಭಾವ ಹೊಂದಿರುವ ಮತ್ತೊಬ್ಬ ಕಲಾವಿದ ಎಂದರೇ ರಮೇಶ್ ಅರವಿಂದ್ .ಅವರು ಸಹ ಬರವಣಿಗೆಗೆ ಹೆಚ್ಚು ಗಮನ ನೀಡುತ್ತಾರೆ. ಅವರ ನಂತರ ಇಂತಹ ಒಳ್ಳೆಯ ಹಾಬಿಗೆ ಆದ್ಯತೆ ನೀಡಿರುವುದು ಸುದೀಪ್ ಮಾತ್ರ!