ಕೆಲಸ ಪೂರೈಸಿತು ಪವನ್ ಪ್ರೀತಿ ಗೀತಿ ಇತ್ಯಾದಿ

ಶನಿವಾರ, 4 ಜನವರಿ 2014 (10:32 IST)
PR
ಕನ್ನಡ ಚಿತ್ರರಂಗದ ಕ್ರಿಯೇಟಿವ್ ನಿರ್ದೇಶಕ ಪವನ್ ವಡೆಯರ್. ಅವರು ಈಗ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ ಚೊಚ್ಚಿಲ ಚಿತ್ರ ಪ್ರೀತಿ ಗೀತಿ ಇತ್ಯಾದಿ ಯನ್ನು ನಿರ್ದೆಶಿಸಿರುವವರು ವೀರೇಂದ್ರ. ಇದು ವೀರೇಂದ್ರ ಅವರ ಮೊದಲ ಸ್ವತಂತ್ರ ನಿರ್ದೇಶನದ ಚಿತ್ರವಾಗಿದೆ,

ಈ ಚಿತ್ರ ಚಿತ್ರೀಕರಣ ಪೂರ್ಣಗೊಂಡಿದ್ದು ಈಗ ಅದು ಎರಡು ತಿಂಗಳ ಬಳಿಕ ಬಿಡುಗಡೆಯ ಭಾಗ್ಯ ಕಾಣಲಿದೆ. ಮೈಸೂರು, ತೀರ್ಥಹಳ್ಳಿ , ಬೆಳಗಾಂ , ಮತ್ತು ಬೆಂಗಳೂರಿನಲ್ಲಿರುವ ಅತ್ಯಂತ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆಚಿ ತ್ರವನ್ನು. ಈ ಚಿತ್ರದ ಕೊನೆಯ ದಿನದ ಶೂಟಿಂಗ್ ಮಾಡುವ ಸ್ಥಳಕ್ಕೆ ಸಿನಿಮಾ ಸೆಲೆಬ್ರಿಟಿಗಳಾದ ಯೋಗರಾಜ್ ಭಟ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರಂತೆ.

ಈ ಚಿತ್ರದಲ್ಲಿ ಪವನ್ ವಡೆಯರ್ ಬಾರ್ ಓನರ್ ಆಗಿ ನಟಿಸಿದ್ದಾರೆ. ಈ ನಟ/ ನಿರ್ದೇಶಕ ಪವನ್ ವಡೆಯರ್ ಅವರಿಗೆ ನಟನೆ ಹೊಸದಲ್ಲ. ಅವರು ರಂಗಭೂಮಿ ಕಲಾವಿದರಾಗಿದ್ದು ಈಗಾಗಲೇ ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ