ಚಿತ್ರದ ಗುಣಮಟ್ಟ ಮುಖ್ಯ, ಬಜೆಟ್ ಅಲ್ಲ!

MOKSHA
ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ಪೋಷಕ ನಟ ಯಾರೆಂಬ ಪ್ರಶ್ನೆಗೆ ತಟ್ಟನೆ ನೆನಪಾಗುವುದು ರಂಗಾಯಣ ರಘು. ದುನಿಯಾ ಚಿತ್ರದ ಅಮೋಘ ಅಭಿನಯದಿಂದ ಚಿತ್ರದಲ್ಲಿ ಅವರಿದ್ದರೆ ಚಿತ್ರಕ್ಕೊಂದು ಶಕ್ತಿ ಎಂಬುದು ಎಲ್ಲರ ಅಭಿಮತ.

ಇತ್ತೀಚೆಗೆ ಇವರ ಅಭಿನಯದ ಮಿಸ್ಟರ್ ಪೈಂಟರ್ ಬಿಡುಗಡೆಗೊಂಡಿದೆ. ಇದರಲ್ಲಿ ಇವರದ್ದೇ ಪ್ರಮುಖ ಪಾತ್ರ. ಸುಣ್ಣ ಬಣ್ಣ ಬಳಿದು ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಮನೆಯಲ್ಲಿನ ಮನಸುಗಳನ್ನು ಸರಿಪಡಿಸುವುದೇ ಇವರ ಕಾಯಕ. ತೆಳುವಾದ ಹಾಸ್ಯದೊಂದಿಗೆ ಮೂಡಿ ಬಂದಿದ್ದ ನಿರೂಪಣೆಗೆ ಪ್ರೇಕ್ಷಕ ಮೆಚ್ಚಲಿದ್ದಾರೆ ಎನ್ನುತ್ತಾರೆ ರಂಗಾಯಣ ರಘು.

ಚಿತ್ರದ ಬಜೆಟ್ಗಿಂತ ಚಿತ್ರದ ಫಲಿತಾಂಶವೇ ಮುಖ್ಯ. ಎಲ್ಲ ರೀತಿಯ ಚಿತ್ರಗಳನ್ನು ಪ್ರೇಕ್ಷಕ ಒಂದೇ ಬೆಲೆಯ ಟಿಕೆಟ್ ಖರೀದಿಸಿ ನೋಡುತ್ತಾನೆ. ಚಿತ್ರ ನೋಡುವ ಪ್ರೇಕ್ಷಕನಿಗೆ ಗುಣಮಟ್ಟವೇ ಮುಖ್ಯವಾಗುತ್ತದೆ ವಿನಃ ಬಜೆಟ್ ಅಲ್ಲ ಎನ್ನುತ್ತಾರೆ ಅವರು.

ವೆಬ್ದುನಿಯಾವನ್ನು ಓದಿ