ಥ್ರಿಲ್ಲರ್ ಮಂಜು ಅದೃಷ್ಟ

MOKSHA
ಥ್ರಿಲ್ಲರ್ ಮಂಜು ಸದ್ದಿಲ್ಲದೆ ಒಂದು ಚಿತ್ರ ತೆರೆಕಂಡಿದೆ. ಅದೃಷ್ಟ ಹೆಸರಿನ ಈ ಚಿತ್ರಕ್ಕೆ ಕಳೆದ ವರ್ಷವೇ ಚಿತ್ರೀಕರಣ ನಡೆದಿದೆ ಎನ್ನುತ್ತಾರೆ ಥ್ರಿಲ್ಲರ್ ಮಂಜು.

ಚಿತ್ರದಲ್ಲಿ ಅಭಿಜಿತ್ ಪ್ರಮುಖ ಪಾತ್ರದಲ್ಲಿದ್ದಾರೆ. ಭೂತ ಬಂಗಲೆಯೊಂದರಲ್ಲಿ ನಡೆಯುವ ಕತೆಯಲ್ಲಿ ಗಂಡ, ಹೆಂಡತಿ ತಮ್ಮ ಮಗು ಜೊತೆ ಆತ್ಮಹತ್ಯೆ ಮಾಡಲು ಬಂಗಲೆ ಬರುವಾಗ ನಡೆಯುವ ಕೆಲವು ವಿಚಿತ್ರ ಬೆಳವಣಿಗೆಗಳಿಂದಾಗಿ ಆತ್ಮಹತ್ಯೆ ಉದ್ದೇಶ ಈಡೇರುವುದಿಲ್ಲ ಇದು ಚಿತ್ರ ಒನ್‌ಲೈನ್ ಸ್ಟೋರಿ.

ಥ್ರಿಲ್ಲರ್ ಮಂಜು ನಿರ್ದೇಶನದ ಇನ್ನೊಂದು ಚಿತ್ರ ರಜನಿಗೆ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಉಪೇಂದ್ರ ನಾಯಕರಾಗಿ ನಟಿಸಿರುವ ಚಿತ್ರ ಕ್ಲೈಮಾಕ್ಸ್‌ಗಾಗಿ ಸಾಕಷ್ಟು ವ್ಯಯಿಸಲಾಗಿದೆ ಎನ್ನುತ್ತಾರೆ ನಿರ್ಮಾಪಕ ಮಂಜು. ಇದನ್ನು ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಪಕ್ಕದ ಮೈದಾನದಲ್ಲಿ ಚಿತ್ರೀಕರಣ ನಡೆಸಿದ್ದಾರೆ. 25 ಸ್ಕಾರ್ಪಿಯೋ ಸೇರಿದಂತೆ 200ಕ್ಕೂ ಹೆಚ್ಚು ವಾಹನಗಳು ಮೈದಾನದಲ್ಲಿ ಓಡಾಡಿದೆ. ದುಬಾರಿ ಮತ್ತು ಅಪಾಯಕಾರಿ ಕ್ಲೈಮಾಕ್ಸ್‌ನಲ್ಲಿ ಯಾವುದೇ ಆಕಸ್ಮಿಕ ಘಟನೆಗಳು ನಡೆದಿಲ್ಲ ಎನ್ನುವುದು ಸಮಾಧಾನದ ವಿಷಯ. ಅಂದಹಾಗೆ ಥ್ರಿಲ್ಲರ್ ಮಂಜು ಈ ಚಿತ್ರದ ಬಳಿಕ ಬ್ಯಾಟಿಂಗ್ ಎನ್ನುವ ಚಿತ್ರ ಮಾಡಲಿದ್ದಾರೆ. ಬಹುಶಃ ರಜನಿ ಬಳಿಕ ಬ್ಯಾಟಿಂಗ್ ಮಾಡಲಿದ್ದಾರೆ ಅನಿಸುತ್ತೆ.

ವೆಬ್ದುನಿಯಾವನ್ನು ಓದಿ