ದರ್ಶನ್ ಹೀರೋ ಅಂದ್ರೆ ಪ್ರಣೀತಾಗೆ ಖುಷಿಯೋ ಖುಷಿ!

EVENT
ಆಕೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ 'ಪೊರ್ಕಿ' ದರ್ಶನ್‌ರಿಂದಾಗಿ. ಹಾಗಾಗಿ ಅವರನ್ನು ಯಾವತ್ತೂ ಮರೆಯಲ್ಲ. ಅವರ ಸಿನಿಮಾದಲ್ಲಿ ನಟಿಸುವ ಖುಷಿಯೇ ಬೇರೆ. ಅದೇ ಕಾರಣದಿಂದ 'ಸ್ನೇಹಿತರು' ಚಿತ್ರದಲ್ಲಿ ನಟಿಸೋದಿಕ್ಕೆ ಒಪ್ಪಿಕೊಂಡೆ ಅಂತ ಪ್ರಣೀತಾ ಹೇಳಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸ್ನೇಹಿತರು ಚಿತ್ರದಲ್ಲಿ ವಿಜಯ ರಾಘವೇಂದ್ರ, ತರುಣ್ ಚಂದ್ರ, ರವಿಶಂಕರ್ ಮತ್ತು ಸೃಜನ್ ಲೋಕೇಶ್ ನಾಯಕರು. ನೀವು ಅವರಲ್ಲಿ ಯಾರಿಗೆ ನಾಯಕಿ ಅಂತಾನೇ ಪ್ರತಿಯೊಬ್ಬರೂ ಕೇಳುತ್ತಿದ್ದಾರೆ. ಇದಕ್ಕೆ ಕಾರಣ, ದರ್ಶನ್ ಇಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು. ಆದರೆ ನಾನು ಹೇಳುತ್ತಿದ್ದೇನೆ ಕೇಳಿ, ನನಗೆ ಈ ಚಿತ್ರದಲ್ಲಿ ದರ್ಶನ್ ಹೀರೋ ಅಂದಿದ್ದಾರೆ ಅಚ್ಚಗನ್ನಡದ ಚೆಲುವೆ.

'ಪೊರ್ಕಿ'ಯ ಮೂಲಕ ಬಂದವರು ಈಗ ಶಶಾಂಕ್ ನಿರ್ದೇಶನದ 'ಜರಾಸಂಧ'ದಲ್ಲಿ ದುನಿಯಾ ವಿಜಯ್‌ಗೆ ಜೋಡಿಯಾಗಿ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಗೀತ ರಚನೆಕಾರ ರಾಮ್ ನಾರಾಯಣ್ ಅವರ 'ಸ್ನೇಹಿತರು' ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಆದರೆ ಪ್ರಣೀತಾ ಈ ಚಿತ್ರವನ್ನು ಒಪ್ಪಿಕೊಳ್ಳಲು ಬೇರೇನೂ ಕಾರಣಗಳಿಲ್ಲ. ಅದು ದರ್ಶನ್ ಮತ್ತು ದರ್ಶನ್ ಮಾತ್ರ. "ಅವರು ನನ್ನ ಮೊದಲ ಹೀರೋ. ಪದಾರ್ಪಣೆ ಮಾಡಿದ್ದ ಚಿತ್ರದ ನಾಯಕನಿಗೆ ಜತೆಯಾಗುವುದೆಂದರೆ ಅದರಲ್ಲಿರುವ ಖುಷಿಯೇ ಬೇರೆ. ಅವರಿದ್ದಾರೆಂಬ ಕಾರಣಕ್ಕಷ್ಟೇ ಚಿತ್ರವನ್ನು ಒಪ್ಪಿಕೊಂಡಿದ್ದೇನೆ" ಎಂದಿದ್ದಾರೆ.

'ಅಪ್ಪು ಪಪ್ಪು' ಚಿತ್ರದಲ್ಲಿ ಬಾಲನಟನಾಗಿ ಮಿಂಚಿದ್ದ ಸ್ನೇಹಿತ್ ಕೂಡ ಇಲ್ಲೊಂದು ಪಾತ್ರ ಮಾಡುತ್ತಿದ್ದಾನೆ. ಆತನ ತಂದೆ ಸೌಂದರ್ಯ ಜಗದೀಶ್ ಚಿತ್ರದ ನಿರ್ಮಾಪಕರು. ಚಿತ್ರೀಕರಣ ಈಗಾಗಲೇ ಆರಂಭಗೊಂಡಿದೆ. ಆದರೆ ದರ್ಶನ್-ಪ್ರಣೀತಾ ಶೂಟಿಂಗ್ ಸದ್ಯಕ್ಕಿಲ್ಲ. ಡಿಸೆಂಬರ್ ನಂತರವಷ್ಟೇ ಅವರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಪ್ರಣೀತಾ ಕನ್ನಡದಲ್ಲಿ ಇತರ ಕೆಲವು ಚಿತ್ರಗಳಿಗೂ ನಾಯಕಿ. ಈ ನಡುವೆ ತಮಿಳಿನಲ್ಲಿ ಜಾಕ್‌ಪಾಟ್ ಹೊಡೆದಿದ್ದಾರೆ. ಅದು 'ಸಗುಣಿ' ಚಿತ್ರದಲ್ಲಿ ಕಾರ್ತಿಗೆ ನಾಯಕಿಯಾಗಿರುವುದು. ಈ ಪೊಲಿಟಿಕಲ್ ಥ್ರಿಲ್ಲರ್ ದೊಡ್ಡ ಬ್ರೇಕ್ ಕೊಡಲಿರುವ ನಿರೀಕ್ಷೆ ಪ್ರಣೀತಾರದ್ದು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ