ನನಸಾದ ಅನುಷ್ಕಾ ಕನಸು..!ಅದ್ಯಾವ ಕನಸು ?

ಗುರುವಾರ, 6 ಫೆಬ್ರವರಿ 2014 (10:09 IST)
PR
ಅನುಷ್ಕಾ ಶೆಟ್ಟಿ ಕೇವಲ ತನಾ ರೂಪದಿಂದ ಮಾತ್ರವಲ್ಲ ಅಭಿನಯದಿಂದಲೂ ಮನಗೆದ್ದ ಚೆಲುವೆ. ಆಕೆ ಮೈಸಿರಿಯಂತೆ ಅಭಿನಯ ಸಾಮರ್ಥ್ಯದ ಹೊಳಪನ್ನು ಆಕೆ ಹಂಚಿ ಅನೇಕಾನೇಕ ಅಭಿಮಾನಿಗಳನ್ನು ಗೆದ್ದಿದ್ದಾಳೆ. ಅನುಷ್ಕಾ ಒಬ್ಬ ಕಲಾವಿದೆ. ಆಕೆಗೆ ಬೇಕಾಗಿರುವ ಮುಖ್ಯ ಸಂಗತಿ ಅಂದರೆ ತನ್ನ ಆಶಯದ ಪಾತ್ರದಲ್ಲಿ ನಟನೆ. ಅನೇಕ ಬಾರಿ ಇಂತಹ ಅವಕಾಶಗಳು ಕಲಾವಿದರಿಗೆ ಸಿಗಲ್ಲ. ಯಾಕೇಂದ್ರೆ ಜನರ ಅಪೇಕ್ಷೆಯಂತೆ ಅವರು ನಡೆಯ ಬೇಕಾಗುತ್ತದೆ. ಆದರೆ ಈಗ ಅನುಷ್ಕಾ ಕನಸು ನನಸಾಗಿದೆ ಎಂದೇ ಹೇಳ ಬಹುದಾಗಿದೆ.

ತನ್ನ ರೂಪದಿಂದ ಆವರೆಗೂ ಮನ ಗೆದ್ದಿದ್ದ ಆ ಚೆಲುವೆ ಅರುಂಧತಿ ಚಿತ್ರದ ಮುಖಾಂತರ ಅಭಿನಯದಿಂದ ಎಲ್ಲರ ಮನ ಗೆದ್ದು ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ತನ್ನ ಬಳಿ ಸೆಳೆದು ಕೊಂಡಳು. ಈಗ ಆಕೆಯ ಕನಸಿನ ಬಗ್ಗೆ ಹೇಳ್ತಿವಿ . ಅನೇಕ ಸಮಯದಿಂದ ಆಕೆಗೆ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗುವ ಆಸೆ ಇತ್ತು. ಆದರೆ ಅದು ನೆರವೇರುವ ಸಾಧ್ಯತೆ ಕಡಿಮೆ ಇತ್ತು. ಆಕೆಯ ಕನಸು ಶಕುನಿ ಚಿತ್ರದಿಂದ ನನಸಾಗಿತ್ತು. ಕಾರ್ತಿ ನಟಿಸುತ್ತಿರುವ ಈ ಚಿತ್ರದಲ್ಲಿ ಆಕೆಯು ಪೊಲೀಸ್ ಪಾತ್ರ ಮಾಡಿದ್ದಾಳೆ. ಆದರೆ ಆ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವ ಅನುಷ್ಕಾ ಈಗ ಅಜಿತ್ ನಟನೆಯ ಗೌತಮ್ ಮೆನನ್ ನಿರ್ದೇಶನದ ಚಿತ್ರದಲ್ಲಿ ಫುಲ್ ಫುಲ್ ಪೊಲೀಸ್ ಅಧಿಕಾರಿ ಆಗಿದ್ದಾಳೆ . ಬಾಹುಬಲಿ ಮತ್ತು ರುದ್ರಮದೇವಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಈ ಯೋಗಾ ಬ್ಯೂಟಿ ತನ್ನ ಪ್ರಿಯವಾದ ಪಾತ್ರ ಮಾಡಲು ಸಿದ್ಧ ಆಗುತ್ತಿದ್ದಾಳೆ . ಖಾಕಿಯಲ್ಲಿ ಆಕೆ ಎಷ್ಟರಮಟ್ಟಿಗೆ ಸೆನ್ಸೇಷನಲ್ ಉಂಟು ಮಾಡುತ್ತಾಳೋ ಕಾದು ನೋಡುವ!

ವೆಬ್ದುನಿಯಾವನ್ನು ಓದಿ