ನಯನಾಳನ್ನು ಮಂಚಕ್ಕೆ ಕರೆದನಂತೆ ಡೈರೆಕ್ಟರ್ ಋಷಿ!

PR
ಆಕೆ ಅತಿಕಾಮಿ. ಸಿಕ್ಕಸಿಕ್ಕ ಪುರುಷರ ತೋಳ ತೆಕ್ಕೆಗಳಲ್ಲಿ ಬಂಧಿಯಾಗುವವಳು. ಆದರೂ ಸಮಾಧಾನವಿಲ್ಲ, ತೃಪ್ತಿಯಿಲ್ಲ. ಇನ್ನಷ್ಟು ಬೇಕೆಂಬ ಹಪಾಹಪಿ. ಇಂತಹ ಪಾತ್ರದಲ್ಲಿ ನಟಿಸಿದಾಕೆಯ ಹೆಸರು ನಯನಾ ಕೃಷ್ಣ. ಚಿತ್ರ 'ಕೊಟ್ಳಲ್ಲಪ್ಪೋ ಕೈ'. ಇದರ ನಿರ್ದೇಶಕ ಋಷಿ. ಈಗ ಅದೇ ನಿರ್ದೇಶಕ ರಿಯಲ್ ಲೈಫಿನಲ್ಲಿ ನಾಯಕಿಯನ್ನು ಮಂಚಕ್ಕೆ ಕರೆದಿದ್ದಾನಂತೆ!

ಗಾಂಧಿನಗರದಲ್ಲೀಗ ಇದೇ ಗುಳ್ಳು. ನಯನಾ ಕೃಷ್ಣ ಎಂಬ ಚತುರೆಯನ್ನು ಋಷಿ ಬಳಸಿಕೊಳ್ಳಲು ಯತ್ನಿಸಿದ್ದು ಹೌದೇ ಎಂಬ ಮಾತುಗಳು. ಇದೇ ಪ್ರಶ್ನೆಯನ್ನು ನಯನಾಳಲ್ಲಿ ಕೇಳಿದರೆ, ಹೌದು ಸಾರ್. ನನಗೆ ಕೊಡಬೇಕಾಗಿರುವ ಹಣವನ್ನು ವಾಪಸ್ ಕೊಡು ಅಂತ ಕೇಳಿದ್ರೆ ರಾತೋರಾತ್ರಿ ಫೋನ್ ಮಾಡಿ ಕಿರಿಕ್ ಮಾಡ್ತಾನೆ. ಮನೆಗೆ ಬಾ ಅಂತ ಕರೀತಾನೆ ಎಂದೆಲ್ಲ ಆರೋಪಿಸಿದ್ದಾಳೆ. ಇದೆಲ್ಲ ಸುಳ್ಳು ಅಂತಾನೆ ನಿರ್ದೇಶಕ ಋಷಿ.

ಏನಿದು ವಿವಾದ?
'ಕೊಟ್ಳಲ್ಲಪ್ಪೋ ಕೈ' ವಿವಾದ ಶುರುವಾಗಿದ್ದು ಈಗಲ್ಲ. ಕೆಲವು ಸಮಯದ ಹಿಂದೆಯೇ ಆರಂಭವಾಗಿತ್ತು. ಈ ಚಿತ್ರದಲ್ಲಿ ನಟಿಸಲು ನಯನಾ ಎರಡು ಲಕ್ಷ ರೂಪಾಯಿ ಸಂಭಾವನೆಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆರ್ಥಿಕ ತೊಂದರೆ ಎದುರಾದಾಗ ನಿರ್ದೇಶಕರಿಗೆ ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ನಯನಾ ಕೊಟ್ಟಿದ್ದಾಳೆ.

ಹೀಗಿದ್ದವಳಿಗೆ ಹಣ ವಾಪಾಸ್ ಮಾಡಲು ಋಷಿಯಲ್ಲಿ ಏನೂ ಇರಲಿಲ್ಲ. ಆಗ ಕೆಲವು ಏರಿಯಾಗಳನ್ನು ಬಿಟ್ಟು ಕೊಡುವಂತೆ ನಯನಾ ಕೇಳಿದ್ದಾಳೆ. ಓಕೆ ಎಂದ ಋಷಿ, ಕೆಲವು ಏರಿಯಾಗಳನ್ನು ಕೊಡೋ ಭರವಸೆಯನ್ನೂ ನೀಡ್ತಾನೆ. ಆದ್ರೆ ಯಾವುದನ್ನೂ ಕೊಡೋದೇ ಇಲ್ಲ. ಇತ್ತೀಚೆಗಷ್ಟೇ ಇದೇ ವಿವಾದ ಭುಗಿಲೆದ್ದು ನಿರ್ದೇಶಕನಿಗೆ ನಯನಾ ಕಪಾಳ ಮೋಕ್ಷ ಮಾಡಿದ್ದೂ ಆಗಿತ್ತು.

ಮಂಚಕ್ಕೆ ಕರೆದ...
ಈಗ ನಯನಾ ಮಾಡ್ತಿರೋ ಆರೋಪ, ನಿರ್ದೇಶಕ ಋಷಿ ನನ್ನನ್ನು ಮಂಚಕ್ಕೆ ಕರೆದರು ಅನ್ನೋದು. ಆರಂಭದಲ್ಲಿ ನನ್ನನ್ನು ತಾಯಿ-ತಂಗಿ ಅಂತಿದ್ದ ಋಷಿ, ನಂತರ ತನ್ನ ನಿಜ ಬಣ್ಣವನ್ನು ತೋರಿಸಲಾರಂಭಿಸಿದ. ಅಶ್ಲೀಲ ಶಬ್ದಗಳಿಂದ ನಿಂದಿಸಲು ಶುರು ಮಾಡಿದ. ಹಣ ಕೇಳಿದಾಗಲೆಲ್ಲ ಕೆಟ್ಟದಾಗಿ ಬೈಯ್ತಾನೆ. ಕುಡಿದು ಕಿರಿಕ್ ಮಾಡ್ತಾನೆ. ನನ್ನನ್ನು ವೇಶ್ಯೆ ಎಂದೆಲ್ಲ ನಿಂದಿಸ್ತಾನೆ. ಮಂಚಕ್ಕೆ ಬಾ, ಎಲ್ಲಾ ಕೊಡ್ತೀನಿ ಅಂತ ಹೇಳ್ತಾನೆ. ಆತ ಸ್ಯಾಡಿಸ್ಟ್, ಸೈಕೋ.. ಹೀಗೆ ನಯನಾ ಆರೋಪ ಮುಂದುವರಿಯುತ್ತದೆ.

ಏನಂತಾನೆ ಋಷಿ...
ಈ ಬಗ್ಗೆ ಋಷಿಯನ್ನೇ ಕೇಳಿದ್ರೆ, ಅದೆಲ್ಲ ಸುಳ್ಳು ಸಾರ್ ಅಂತಾನೆ. ನಾನು ಸಾಲದಲ್ಲಿರೋದು ಹೌದು. ನಯನಾಗೆ ಹಣ ಬಾಕಿ ಇಟ್ಟಿರೋದೂ ಹೌದು. ಆದ್ರೆ ನಾನು ಆಕೆಯನ್ನು ಮಂಚಕ್ಕೆ ಕರೆದಿಲ್ಲ. ಬೈದಿದ್ದೇನೆ, ಆಕೆಯೂ ಬೈದಿದ್ದಾಳೆ. ಆದ್ರೆ ನಾನು ಕೆಟ್ಟವನಲ್ಲ ಸಾರ್ ಅಂತಾನೆ.

ಜತೆಗೆ ಇನ್ನೊಂದು ಆರೋಪವೂ ಋಷಿಯಿಂದ ಬಂದಿದೆ. ತನ್ನನ್ನು ಮದುವೆಯಾಗು ಅಂತ ನಯನಾ ನಿರ್ದೇಶಕರಲ್ಲಿ ದುಂಬಾಲು ಬೀಳ್ತಿದ್ದಾಳಂತೆ. ಹಾಗೆ ಮಾಡಿದ್ರೆ ಹಣ ವಾಪಾಸ್ ಕೊಡಬೇಕಾಗಿಲ್ಲ ಅಂತ ಹೇಳ್ತಿದ್ದಾಳಂತೆ.

ಅಂತೂ ಅತಿಕಾಮಿಯ ಚಿತ್ರ ಮಾಡಲು ಹೋಗಿ, ಅದೇ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದೆ ಚಿತ್ರತಂಡ. ಋಷಿ ವಿರುದ್ಧ ಈಗಾಗಲೇ ನಯನಾ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾಳೆ. ಇನ್ನೇನೇನು ಆಗುತ್ತೋ, ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ