ಪ್ರಕಾಶ್ ರಾಜ್ ಮಾಡಿದ ಐಡಿಯಾ!

ಬುಧವಾರ, 15 ಜನವರಿ 2014 (10:52 IST)
PR
PR
ಏನು ಮಾಡೋಕೆ ಆಗಲ್ಲ ಅಷ್ಟೊಂದು ಸಮಯದ ಅಭಾವ ಇರುತ್ತದೆ ಕೆಲವರಿಗೆ. ಹಾಗೆನ್ನುವುದಕ್ಕಿನ್ತ ಇರುವೈ ಇಪ್ಪತ್ತುನಾಲ್ಕು ಗಂಟೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಬಹಳಷ್ಟು ಮಂದಿ ಅವರಲ್ಲಿ ನಟ ಪ್ರಕಾಶ್ ರಾಜ್ ಸಹ ಒಬ್ಬರು. ಭಾರತದ ಎಲ್ಲ ಭಾಷೆಗಳಲ್ಲೂ ತಮಗೊಂದು ಸ್ಥಾನ ಗಳಿಸಿರುವ ಪ್ರಕಾಶ್ ರಾಜ್ ಮೋಸ್ಟ್ ಬ್ಯುಸಿಯೆಸ್ಟ್ ನಟ. ಈಗ ಕನ್ನಡದಲ್ಲಿ ಒಗ್ಗರಣೆ ಚಿತ್ರದಲ್ಲಿ ನಟಿಸಿ-ನಿರ್ದೇಶಿಸುವ ಹೊಣೆಗಾರಿಕೆ ಹೊತ್ತಿದ್ದಾರೆ. ಈಗ ಪ್ರಕಾಶ್ ರಾಜ್ ಅವರ ಬಗ್ಗೆ ಒಂದು ವಿಶೇಷ ಕಥೆ ಇದೆ.ಇದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ ಆದರು ಆ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ಕೈಗೊಳ್ಳುವುದಕ್ಕೂ ಸಾಧ್ಯ ಇಲ್ಲ.ಪೀಠಿಕೆ ಜಾಸ್ತಿ ಆಯ್ತು ಎಂದು ಅನ್ನಿಸುತ್ತಿದೆ ಎಂಬುದನ್ನು ನಾವು ಬಲ್ಲೆವು.

ಇಲ್ಲಿ ಇರುವ ಸ್ವಾರಸ್ಯ ಅದೇ. ಪ್ರಕಾಶ್ ರಾಜ್ ಇತ್ತೀಚಿಗೆ ಹೈದರಾಬಾದ್ ನಗರಕ್ಕೆ ರಾಷ್ಟ್ರೀಯ ರಂಗಭೂಮಿ ಉತ್ಸವದಲ್ಲಿ ಭಾಗವಹಿಸಲು ಹೊರಟಿದ್ದರು. ಅವರು ವಿಮಾನದಲ್ಲಿ ತಮ್ಮ ಜಾಗದಲ್ಲಿ ಕುಳಿತಾಗ ಧರಿಸಿದ ತಂಪು ಕನ್ನಡಕವನ್ನು ಹೈದರಾಬಾದ್ ಗೆ ಬರುವ ತೆಗೆಯಲೇ ಇಲ್ಲವಂತೆ. ತಮ್ಮ ಫ್ಯಾನ್ಗಳಿಂದ ದೂರ ಇರಲು ಇಂತಹ ಐಡಿಯಾ ಮಾಡಿರ ಬೇಕು ಎಂಬುದು ನಿಮ್ಮ ಎಣಿಕೆ ಆಗಿರ ಬಹುದು, ಆದರೆ ಆ ಸಮಯದಲ್ಲಿ ಸಕತ್ ನಿದ್ದೆ ತೆಗೆದಿದ್ದರಂತೆ ಪ್ರಕಾಶ್.. ನೋಡಿ ಸಾಧಕರು ನಕ್ಕರು, ಓಡಾಡಿದರು ಸುದ್ದಿ ಹಾಗೆ ನಿದ್ದೆ ಮಾಡಿದ್ರು ಸಹ!

ವೆಬ್ದುನಿಯಾವನ್ನು ಓದಿ