ರವಿಚಂದ್ರನ್ ಮತ್ತು ರವಿವರ್ಮ ನಟಿಸುತ್ತಿರುವ ಚಿತ್ರವನ್ನು ಸುದೀಪ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸುದೀಪ್ ಸಹ ಇದ್ದಾರೆ. ಚಿತ್ರದ ಹೆಸರು ಮಾಣಿಕ್ಯ. ಚಿತ್ರದಲ್ಲಿ ಬಂಗಲೆ ಸೆಟ್ಟಿಂಗ್ ಗಾಗಿ ಸುಮಾರು 30 ಲಕ್ಷಕ್ಕೂ ಅಧಿಕ ಮೊತ್ತ ಇನ್ವೆಸ್ಟ್ ಮಾಡಲಾಗಿದೆ. ಈ ಬಗ್ಗೆ ನಾವು ಈ ಮೊದಲು ತಿಳಿಸಿದ್ದೆವು. ಆ ಬಂಗಲೇ ಸೆಟ್ಟಿಂಗ್ ತಮಿಳು, ತೆಲುಗು ಸೇರಿದಂತೆ ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಮೆರೆದಿತ್ತು.
ಆದರೆ ಮತ್ತದೇ ಬಂಗಲೇ ತಮ್ಮ ಚಿತ್ರದಲ್ಲೂ ಕಾಣುವುದು ಬೇಡವೆಂದು ನಿರ್ಧರಿಸಿ ನಿರ್ದೇಶಕರು ಹೇಳಿದಂತೆ. ಅದರ ಸ್ವರೂಪ ಸಂಪೂರ್ಣವಾಗಿ ಬದಲಾಗಿತ್ತು. ಈಗ ಆ ಚಿತ್ರವು ಕಂಠೀರವ ಸ್ಟುಡಿಯೋದಲ್ಲಿ ತನ್ನ ಶೂಟಿಂಗ್ ಮುಗಿಸಿ ಬೀದರ್ ಕಡೆ ಹೊರಟಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ರವಿಶಂಕರ್ ಎರಡು ಜಾಯಿಂಟ್ ಫ್ಯಾಮಿಲಿಗಳ ಯಜಮಾನರು.
ಚಿತ್ರವನ್ನು 10 ದಿನಗಳ ಬೀದರ್ ನಲ್ಲಿ ಶೂಟಿಂಗ್ ಮಾಡಲಾಗುತ್ತದೆ. ಬೀದರ್ ಕೋಟೆ ಇತಿಹಾಸ ಪ್ರಸಿದ್ಧ ವಾದುದು. ಕಥೆಗೆ ಪೂರಕವಾಗಿ ಈ ಪ್ರದೇಶಗಳನ್ನು ಶೂಟ್ ಮಾಡುತ್ತಿದ್ದಾರೆ ಸಿನಿತಂಡ. ಬಹಳ ದಿನಗಳ ಬಳಿಕ ಸುದೀಪ್ ಆಕ್ಷನ್ ಕಟ್ ಕಡೆ ಗಮನ ನೀಡಿದ್ದಾರೆ. ಅವರ ಮಾಣಿಕ್ಯ ಎಲ್ಲರ ಹೃದಯ ಗೆಲ್ಲಲಿ.