ಭಜರಂಗಿ ಚಿತ್ರೀಕರಣ ಸಂಪೂರ್ಣ: ರಾಜ್ಯೋತ್ಸವದಂದು ಬಿಡುಗಡೆ

ಬುಧವಾರ, 21 ಆಗಸ್ಟ್ 2013 (10:43 IST)
PR
ಶಿವರಾಜ್ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಭಜರಂಗಿಯ ಚಿತ್ರೀಕರಣ ಸಂಪೂರ್ಣಗೊಂಡಿದೆ. ಇದೇ ನವಂಬರ್ ಒಂದರಂದು ರಾಜ್ಯೋತ್ಸವದ ಸಂಭ್ರಮದ ದಿನ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಮೊದಲಾದೆಡೆ ಚಿತ್ರೀಕರಣ ನಡೆದಿತ್ತು. ಹೆಸರಘಟ್ಟ, ಅಭಿಮಾನಿ ಸ್ಟುಡಿಯೋದಲ್ಲಿ ಇದಕ್ಕಾಗಿ ವಿಶೇಷ ಸೆಟ್ಹಾಕಿ ಚಿತ್ರೀಕರಣ ಮಾಡಿದ್ದೂ ಆಗಿತ್ತು. ಮೂರು ಹಾಡುಗಳ ಚಿತ್ರೀಕರಣ ಸೇರಿದಂತೆ 100 ದಿನಗಳ ಚಿತ್ರೀಕರಣ ನಡೆದಿದೆ.

ಬಾಕಿಯಿರುವ ಎರಡು ಹಾಡುಗಳ ಚಿತ್ರೀಕರಣ ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಎ ಹರ್ಷ ಚಿತ್ರಕಥೆ ಬರೆದು ನಿರ್ದೇಶನ ಮಾಡುತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನಿರ್ದೇಶಕರೂ ಹೌದು. ಜೈ ಆನಂದ್ ನಿರ್ದೇಶಕರಾಗಿರು ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಶಿವರಾಜ್ಕುಮಾರ್, ಐಂದ್ರಿತಾ ರೇ, ಊರ್ವಶಿ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್. ಉಮೇಶ್, ಮಧು, ಚೇತನ್ ಮೊದಲಾದವರು ತಾರಾಗಣದಲ್ಲಿದ್ದಾರೆ. ನವೆಂಬರ್ 1ರಂದು ಬಿಡುಗಡೆಯಾಗುವ ಚಿತ್ರದ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿರುವುದಂತೂ ನಿಜ.

ವೆಬ್ದುನಿಯಾವನ್ನು ಓದಿ