'ಭಾಗ್ಯದ ಬಳೆಗಾರ'ದಲ್ಲಿ ಹೆಜ್ಜೆ ಹಾಕಿದ ಸುಧಾ- ಅನು

MOKSHENDRA
'ಭಾಗ್ಯದ ಬಳೆಗಾರ' ಚಿತ್ರಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಚಿತ್ರದ ಜನಪ್ರಿಯ ಗೀತೆಗೆ ಸುಧಾರಾಣಿ ಹಾಗೂ ಅನು ಪ್ರಭಾಕರ್ ಹೆಜ್ಜೆ ಹಾಕಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆ 'ಭಾಗ್ಯದ ಬಳೆಗಾರ ಬಾಗಿಲಿಗೆ ಬಂದ..' ಹಾಡಿಗೆ ಸುಧಾರಾಣಿ ಜಾನಪದ ದಿರಿಸಿನಲ್ಲಿ ಹೆಜ್ಜೆ ಹಾಕಿದರು.
MOKSHENDRA

ಸುಧಾರಾಣಿ ತಮ್ಮ ವೃತ್ತಿ ಜೀವನವನ್ನು ಶಿವರಾಜ್‌ಕುಮಾರ್ ನಾಯಕತ್ವದ 'ಆನಂದ್' ಚಿತ್ರದ ಮೂಲಕ ಆರಂಭಿಸಿದ್ದರು. ಈಗ ಅದೇ ನಾಯಕನಿರುವ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕುವುದು ತುಂಬಾ ಖುಷಿಯಾಗುತ್ತಿದೆ ಎಂದರು.

ನಟಿ ಅನುಪ್ರಭಾಕರ್ ಮತ್ತೊಂದು ಜಾನಪದ ಗೀತೆಯಾದ 'ಗಲ್ಲು ಗಲ್ಲೆನುತಾ ಗೆಜ್ಜೆ ಗಲ್ಲು..' ಹಾಡಿಗೆ ಗೆಜ್ಜೆ ಕುಣಿಸಿದರು. ಈ ಎರಡು ಹಾಡುಗಳು ಚಿತ್ರ ಎರಡು ಬೇರೆ ಬೇರೆ ಸನ್ನಿವೇಶಗಳಲ್ಲಿ ಬರುತ್ತದೆಂದು ನಿರ್ಮಾಪಕರು ತಿಳಿಸಿದರು. ಚಿತ್ರದಲ್ಲಿ ಶಿವರಾಜ್ ಕುಮಾರ್ ತೀರಾ ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದರಂತೆ. ಕಳೆದ ವರ್ಷ 'ನಂದ ಲವ್ಸ್ ನಂದಿತಾ' ಚಿತ್ರ ನಿರ್ಮಿಸಿದ್ದ ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
MOKSHENDRA