ಮಗನಿಗಾಗಿ ಅಪ್ಪನ 'ಪ್ರೀತಿಯ ತೇರು'

ಮಗನನ್ನು ನಾಯಕನನ್ನಾಗಿಸಲು ಚಿತ್ರ ಮಾಡುವ ಅಪ್ಪಂದಿರ ಸಂಖ್ಯೆ ಗಾಂಧಿನಗರದಲ್ಲಿ ಹೆಚ್ಚುತ್ತಿದೆ. 'ಪ್ರೀತಿಯ ತೇರು' ಚಿತ್ರದ ನಿರ್ಮಾಪಕ ಲೋಕೇಶ್ ರೆಡ್ಡಿ ಕೂಡಾ ತಮ್ಮ ಮಗನನ್ನು ನಾಯಕನನ್ನಾಗಿ ಮಾಡಲು 'ಪ್ರೀತಿಯ ತೇರು' ಎಂಬ ಚಿತ್ರ ಮಾಡಿದ್ದಾರೆ. ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

ಪ್ರೀತಿಯ ತೇರನ್ನು ಪ್ರಸಾದ್ ಅವರ ನಿರ್ದೇಶನದಲ್ಲಿ ನಿರ್ಮಾಪಕರ ಮಗ ತನಿ ಎಳೆಯುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಎಲ್ಲಾ ಹಾಡುಗಳು ಚೆನ್ನಾಗಿ ಬಂದಿವೆ. ಚಿತ್ರದ ಒಂದೊಂದು ಹಾಡು ಚಿತ್ರದ ಕಥೆ ಹೇಳಲಿದೆ ಎಂದರು ಸಂಗೀತ ನಿರ್ದೇಶಕ ಹಾಗೂ ನಿರ್ದೇಶಕ ಪ್ರಸಾದ್.

ಇತ್ತೀಚೆಗೆ ಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿನಗರದ ಗ್ರೀನ್‌ಹೌಸ್‌ನಲ್ಲಿ ಇಡೀ ಚಿತ್ರ ತಂಡವೇ ನೆರೆದಿತ್ತು. ''ಕನ್ನಡ ಪ್ರೇಕ್ಷಕರು ಪ್ರೋತ್ಸಾಹಿಸಿದರೆ ಮತ್ತಷ್ಟು ಉತ್ತಮ ಚಿತ್ರ ನೀಡಲಾಗುವುದು'' ಎಂದರು ನಿರ್ಮಾಪಕ ಲೋಕೇಶ್ ರೆಡ್ಡಿ. ಧ್ವನಿ ಸುರುಳಿ ಬಿಡುಗಡೆ ಮಾಡಿದ ನಿರ್ಮಾಪಕ ಕೆ.ಮಂಜು, ''ಗಾಂಧಿನಗರಕ್ಕೆ ಹಣ ಮಾಡುತ್ತೇವೆಂದು ಬರಬೇಡಿ. ಹಣ ಕಳೆದುಕೊಳ್ಳುವ ಮನಸ್ಸು ಇರಬೇಕು'' ಎಂದರು. ಪ್ರೀತಿಯ ತೇರನ್ನು ಪ್ರೇಕ್ಷಕ ಎಳೆಯುತ್ತಾನೋ ಕಾದು ನೋಡಬೇಕು.
MOKSHENDRA