ಮುಗಿದ 'ರಾವಣ'ನ ಅಟ್ಟಹಾಸ

MOKSHA
ರಾವಣ ತನ್ನ ಅಟ್ಟಹಾಸ ಮುಗಿಸಿದ್ದಾನೆ. ಅಂದರೆ ರಾವಣ ಚಿತ್ರವು ತನ್ನೆಲ್ಲಾ ಕೆಲಸಗಳನ್ನು ಮುಗಿಸಿ ಮೊದಲ ಪ್ರತಿ ಸಿದ್ದಗೊಂಡು ಇದೀಗ ಶೀಘ್ರದಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ ಯೋಗೀಶ್ ಹುಣಸೂರ್ ತಿಳಿಸಿದ್ದಾರೆ.

ಕಿರಿಯ ವಯಸ್ಸಿನಲ್ಲೇ ನಾಯಕ ಪಟ್ಟ ಏರಿ ಕುಳಿತಿರುವ ಯೋಗೀಶ್ ಇವರೆಗೆ ನಟಿಸಿರುವ ಚಿತ್ರಗಳ ಪಾತ್ರಕ್ಕಿಂತ ರಾವಣ ಚಿತ್ರದಲ್ಲಿ ನಟಿಸಿರುವ ಪಾತ್ರ ವಿಭಿನ್ನವಾಗಿದೆ. ಇದರಿಂದ ಅಭಿಮಾನಿಗಳು ಫುಲ್ ಖುಷಿಯಾಗಲಿದ್ದಾರೆ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಅಲ್ಲದೆ, ಚಿತ್ರದಲ್ಲಿ ಲೂಸ್ ಮಾದ ಡಿಫರೆಂಟ್ ಆದ ಚಕ್ಲಿ ನಿಪ್ಪಟ್ಟು ಹಾಡಿಗೆ ಹೆಜ್ಜೆ ಹಾಕಿ ಮತ್ತೆ ಅಭಿಮಾನಿಗಳಿಂದ ಭೇಷ್ ಎನಿಸಿಕೊಳ್ಳಲಿದ್ದಾರಂತೆ.

ರಾವಣ ಚಿತ್ರದ ತಾರಾಂಗಣದಲ್ಲಿ ಸಂಚಿತಾ ಪಡುಕೋಣೆ, ಸಂತೋಷ್, ಶ್ರೀನಿವಾಸಮೂರ್ತಿ, ದ್ವಾರಕೀಶ್, ನೀನಾಸಂ ಅಶ್ವತ್ ಮುಂತಾದವರಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯನ್ನು ಹುಣಸೂರ್ ಬರೆದಿದ್ದು, ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ