ಯೋಗರಾಜ್ ಭಟ್ಟರ ಕ್ಯಾಂಪಿಗೆ ಸೇರ್ಪಡೆ ಆದ ರಕ್ಷಿತ್ ಶೆಟ್ಟಿ

ಶನಿವಾರ, 22 ಮಾರ್ಚ್ 2014 (09:47 IST)
PR
ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಖ್ಯಾತಿಯ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಭರವಸೆಯ ನಟ. ಅವರ ಇತ್ತೀಚಿನ ಚಿತ್ರ ಉಳಿದವರು ಕಂಡಂತೆ ಟ್ರೈಲರ್ ಯಶಸ್ವಿಯಾಗಿ ಜನಮನ ಗೆದ್ದಿದೆ. ಈ ಚಿತ್ರ ಇದೆ ತಿಂಗಳು 28ಕ್ಕೆ ಬಿಡುಗಡೆ ಆಗಲಿದೆ.

ಆದರೆ ಈಗ ಹೇಳ ಹೊರಟಿರುವ ಸಂಗತಿ ಅದಲ್ಲ. ನಟ ರಕ್ಷಿತ್ ಶೆಟ್ಟಿ ಅವರ ಹೊಸ ಚಿತ್ರವೂ ಸೆಟ್ಟೇರುತ್ತಿದೆ. ಅದನ್ನು ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಕ್ಷಿತ್ ಜೊತೆ ಆಗಿರೋದು ಅಮೂಲ್ಯ.

PR
ಈ ಚಿತ್ರದ ಹೆಸರು ವಾಸ್ತು ಪ್ರಕಾರ . ಈ ಚಿತ್ರವೂ ಮೇ ತಿಂಗಳಲ್ಲಿ ತನ್ನ ಕೆಲಸ ಆರಂಭ ಮಾಡುತ್ತದೆ ಎನ್ನುವ ಸಂಗತಿ ಹೇಳಿದ್ದಾರೆ ಭಟ್ಟರು.ವಾಸ್ತುಪ್ರಕಾರ ಸಿನಿಮಾವು ಯೂತ್ ಫುಲ್ ಅಂಶವನ್ನು ಹೊಂದಿದೆಯಂತೆ. ಈ ಚಿತ್ರವೂ ಕನ್ನಡದಲ್ಲಿ ಮಾತ್ರವಲ್ಲ ಹಿಂದಿಯಲ್ಲೂ ಸಹ ತಯಾರಾಗುತ್ತದೆ ಎನ್ನುವ ಮಾತನ್ನು ಯೋಗರಾಜ್ ಭಟ್ಟರು ಹೇಳಿದ್ದಾರೆ.

ಜೂನ್ 15 ಆರಂಭ ಆಗುವ ವಿಶ್ವ ಪ್ರತಿಷ್ಟಿತ ಕ್ಯಾನೆ ಚಲನ ಚಿತ್ರೋತ್ಸವಕ್ಕೆ ಉಳಿದವರು ಕಂಡಂತೆ ಚಿತ್ರ ಸಹ ಪ್ರದರ್ಶಿಸುವ ಸಾಧ್ಯತೆ ಇದೆ . ಒಟ್ಟಾರೆ ಕನ್ನಡ ರಕ್ಷಿತ್ ಶೆಟ್ಟಿ ಅವರು ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ