ಯೋಗಿಗೆ ಕೈ ಹಿಡಿದ ಅದೃಷ್ಟ

MOKSHA
ಚಿತ್ರ ಕೈಕೊಟ್ಟರೂ ಅದೃಷ್ಟ ಕೈಕೊಡಲ್ಲ ಎಂಬ ಮಾತು ಲೂಸ್ ಮಾದ ಯೋಗಿಶ್ ಪಾಲಿಗೆ ಅಕ್ಷರಶಃ ಸತ್ಯ. ಬಹು ನಿರೀಕ್ಷೆಯ ಪ್ರೀತ್ಸೇ ಪ್ರೀತ್ಸೇ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋತು ಹೋದರೂ, ಯೋಗಿ ಜನಪ್ರಿಯತೆಗೇನೂ ಕಮ್ಮಿಯಿಲ್ಲ.

ಈಗಾಗಲೇ ಯೋಗೀಶ್ ಎರಡು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಒಂದು ಯೋಗಿ ಅಪ್ಪ, ಟಿ.ವಿ. ಸಿದ್ದರಾಜು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಯಕ್ಷ ಎಂದು ಹೆಸರಿಡಲಾಗಿದೆ. ದುನಿಯ ಚಿತ್ರದ ಬಳಿಕ ಚಿತ್ರರಂಗದಿಂದ ಹೊರ ಬಂದಿದ್ದ ಸಿದ್ದರಾಜು, ಅಂಬಾರಿ ಚಿತ್ರದ ಸಂದರ್ಭದಲ್ಲಿ ಚಿತ್ರ ಪೂರ್ಣಗೊಳ್ಳುವ ಮೊದಲೇ ಈಚೆ ಬಂದಿದ್ದರು. ಆದಾದ ಬಳಿಕ ನಿರ್ಮಿಸುತ್ತಿರುವ ಚಿತ್ರ ಯಕ್ಷ. ಚಿತ್ರವನ್ನು ರಮೇಶ್ ರಾವ್ ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ.

ಇನ್ನೊಂದು ಚಿತ್ರ ಶನಿವಾರ. ಇದನ್ನು ಯೋಗೀಶ್ ಹುಣಸೂರು ನಿರ್ದೇಶಿಸುತ್ತಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ. ಇವೆರಡೂ ಚಿತ್ರ ಯೋಗೀಶ್‌ರ ಹಿಟ್ ಲಿಸ್ಟಿಗೆ ಸೇರಲಿದೆಯೋ ಕಾದುನೋಡಬೇಕು.

ವೆಬ್ದುನಿಯಾವನ್ನು ಓದಿ