ರಮ್ಯಾ ಕೊಂಡಿದ್ದಾರಾ ನೀರ್ ದೋಸೆ? !

ಬುಧವಾರ, 13 ನವೆಂಬರ್ 2013 (11:33 IST)
PR
ಅದ್ಯಾಕೋ ಪಾಪ ನೀರ್ ದೋಸೆ ಅದೃಷ್ಟವೇ ಸರಿಯಾಗಿಲ್ಲ. ಅದನ್ನು ತಯಾರಿಸಲು ಹೊರಟಿರುವ ಯಜಮಾನನ ದೋಸೆ ಹಿಟ್ಟು ನೀರು ಮತ್ತು ಕಾವಲೀನೂ ತೂತು! ಪರಿಸ್ಥಿತಿ ಹೀಗಿರುವಾಗ ದೋಸೆ ಮಾಡುವ ಕನಸು ನನಸಾಗಲು ಸಾಧ್ಯವೆ?

ನಿಮಗೆ ಗೊತ್ತಾಗಿರ ಬೇಕು ನಾವು ಯಾವ ವಿಷಯದ ಬಗ್ಗೆ ಹೇಳ್ತಾ ಇದ್ದೀವಿ ಅಂತ. ಹೌದು ನೀರ್ ದೋಸೆ ಸಿನಿಮಾ ಆರಂಭ ಆದ ದಿನದಿಂದ ಒಂದಲ್ಲ ಒಂದು ವಿವಾದಗಳು ಸುತ್ತಿಕೊಂಡು ಅ ಸಿನಿಮಾ ಗಿರಿಕಿ ಹೊಡೆಯುತ್ತಾ ಇದೆ. ಆದರೂ ಚಿತ್ರದ ನಿರ್ಮಾಪಕ ಮಾತ್ರ ತನ್ನ ಛಲ ಬಿಡದೆ ಚಿತ್ರಕ್ಕೆ ಜೀವ ಕೊಡಲು ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ಹಾಕ್ಯಾಟ ಹದಕ್ಕೆ ತರಲು ಕರ್ನಾಟಕ ಫಿಲಂ ಚೇಂಬರ್ ಸಿದ್ಧ ವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನವೆಂಬರ್ 17 ರಂದು ರಮ್ಯಾ ಮತ್ತು ಚಿತ್ರ ನಿರ್ಮಾಪಕರ ನಡುವೆ ಸಾಮರಸ್ಯ ತರಲು ಕರ್ನಾಟಕ ಫಿಲಂ ಚೇಂಬರ್ ಸಿದ್ಧ ವಾಗಿದೆ.

ಇತ್ತೀಚೆಗೆ ನಡೆದ ಸಂಧಾನ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಭಾಗವಹಿಸಿರಲಿಲ್ಲ. ಆಕೆಯ ಗೈರು ಹಾಜರಿಯಿಂದ ಯಾವ ನಿರ್ಧಾರಕ್ಕೂ ಬರದಂತೆ ಅಲ್ಲೇ ನಿಂತಿತ್ತು!

ಲೋಕಸಭಾ ಚುನಾವಣೆಗೂ ಮುನ್ನ ನೀಡಿದ್ದ ದಿನಾಂಕಗಳನ್ನು ಆಕೆ ಸದುಪಯೋಗ ಮಾಡಿಕೊಂಡಿರಲಿಲ್ಲ, ಆ ಬಳಿಕ ಅಂದ್ರೆ ಎಲೆಕ್ಷನ್ ಗೆದ್ದ ಬಳಿಕವೂ ಚಿತ್ರದ ಬಗ್ಗೆ ಯಾವುದೇ ರೀತಿಯ ಗಮನ ನೀಡಿರಲಿಲ್ಲ.ರಮ್ಯ ಚಿತ್ರದಲ್ಲಿ ನಟಿಸದೇ ಇರುವ ಬಗ್ಗೆ ಹೇಳಿದ ಲೀಡಿಂಗ್ ಆಕ್ಟ್ರರ್ ಜಗ್ಗೇಶ್ ಅವರು ಹಾಗೇನಾದರೂ ಆಕೆ ಚಿತ್ರದಲ್ಲಿ ನಟಿಸದೇ ಇದ್ದಲ್ಲಿ ಈಗಾಗಲೇ ಚಿತ್ರಕ್ಕೆಂದು ಆಗಿರುವ ವೆಚ್ಚವನ್ನು ಭರಿಸ ಬೇಕು ಎಂದು ಹೇಳಿದ್ದಾರೆ.

ಒನದು ಗಾಳಿಸುದ್ದಿ ಪ್ರಕಾರ ರಮ್ಯಾ ಆ ಚಿತ್ರವನ್ನು ಕೊಂಡಿದ್ದಾರೆ. ಆದರೇ ಅದನ್ನು ಬಿಡುಗಡೆ ಮಾಡುತ್ತಿಲ್ಲ, ಯಾಕೆಂದರೆ ಅದರಲ್ಲಿನ ಪಾತ್ರ ಆಕೆಯ ರಾಜಕೀಯ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುವುದು ನಿಶ್ಚಿತ ಎಂದು ತಿಳಿದು ಈ ನಿರ್ಧಾರ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ