ಲುಸಿಯಾಗಿಲ್ಲ ರಾಷ್ಟ್ರ ಪ್ರಶಸ್ತಿ ಎಂದು ನೊಂದಿರುವ ಪವನ್ ಕುಮಾರ್

ಶನಿವಾರ, 19 ಏಪ್ರಿಲ್ 2014 (10:00 IST)
PR
2014ರ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯು ಪ್ರಕಟ ಆಗಿದೆ. ಆದರೆ ಅದರಲ್ಲಿ ಕನ್ನಡದ ಭಿನ್ನ ಚಿತ್ರ ಲುಸಿಯಾಗೆ ಯಾವುದೇ ಪ್ರಶಸ್ತಿ ದೊರಕಿಲ್ಲ. ಇದರಿಂದ ನಿರ್ದೇಶಕ ಪವನ್ ಕುಮಾರ್ ಗೆ ಬೇಸರ ಆಗಿದೆ. ಅವರು ಅದರ ಬಗ್ಗೆ ಬೇಸರ ವನ್ನು ಟ್ವಿಟ್ ಮಾಡಿ ವ್ಯಕ್ತ ಪಡಿಸಿದರು.

ಈ ಚಿತ್ರದಲ್ಲಿ ನೀನಾಸಂ ಸತೀಶ್ ಮತ್ತು ಶ್ರುತಿ ಹರಿಹರನ್ ನಟಿಸಿದ್ದಾರೆ. ತನ್ನ ಚಿತ್ರ ಲೂಸಿಯ ಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿಲ್ಲ ಎನ್ನುವ ಬೇಸರದ ಸಂಗತಿ ಒಂದು ಕಡೆ ಇಟ್ಟರೆ , ಮತ್ತೊಂದು ಕಡೆ ಈ ಚಿತ್ರ ಮೆಲ್ಬೋರ್ನ್ ಚಿತ್ರೋತ್ಸವದಲ್ಲಿ ಪ್ರದರ್ಶಿತ ಆಗುತ್ತಿದೆ. ಯಾರು ಇದನ್ನು ಹಿರಿತೆರೆಯಲ್ಲಿ ವೀಕ್ಷಿಸಿಲ್ಲವೊ ಅವರು ಅದನ್ನು ನೋಡುವ ಸದವಕಾಶ ಎಂದು ಹೇಳಿದ್ದಾರೆ. ಈ ಚಲನ ಚಿತ್ರೋತ್ಸವ ಮೇ 9 ರಿಂದ ಆರಂಭ ಆಗುತ್ತದೆ.

ವೆಬ್ದುನಿಯಾವನ್ನು ಓದಿ