ವೆಂಕಟನ ಸಂಕಟ....

ಸೋಮವಾರ, 19 ಜನವರಿ 2009 (16:19 IST)
ವೆಂಕಟ ಇನ್ ಸಂಕಟ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಗರದ ಪ್ರಸಿದ್ಧ ಮಳಿಗೆಯೊಂದರಲ್ಲಿ ಕಿಡಿಗೇಡಿಗಳು ಬಾಂಬ್ ಇರಿಸಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣವೇ ಕಾರ್ಯಪ್ರವೃತ್ತನಾದ ಎಸ್.ಐ. ವೆಂಕಟ ಬಾಂಬ್ ನಿಷ್ಕ್ರಿಯಗೊಳಿಸಿ ನಿಟ್ಟುಸಿರು ಬಿಡುತ್ತಾನೆ.
MOKSHA
ಆದರೆ ಮಿ.ಲಡ್ಡು ಎಂಬ ಪೊಲೀಸ್ ಪೇದೆ ತನ್ನ ಕಡೆಗೆ ಆ ಯಶಸ್ಸಿನ ಗುಟ್ಟನ್ನು ಸೆಳೆದು ಮೇಲಾಧಿಕಾರಿಗಳಿಂದ ಪ್ರಶಂಸೆ ಜೊತೆಗೆ ಪ್ರಮೋಶನ್ ಕೂಡಾ ಪಡೆಯುತ್ತಾನೆ. ತನ್ನ ಸಾಧನೆಯನು ಮತ್ಯಾರೋ ಬಳಸಿಕೊಳ್ಳುವುದನ್ನು ಕಂಡು ವೆಂಕಟನಿಗೆ ಸಂಕಟವಾಗುತ್ತದೆ. ಇತ್ತೀಚೆಗೆ ನಗರದ ಗೋಪಾಲನ್ ಮಾಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಹಾಗೂ ಹಾಸ್ಯ ನಟರಾಗಿ ದೇವದಾಸ್ ಕಾಪಿಕಾಡ್ ನಟಿಸಿದ್ದಾರೆ. ನರೇನ್ ಮಗಲಾನಿ ನಿರ್ಮಿಸುತ್ತಿರುವ ಈ ಚಿತ್ರವನ್ನು ರಮೇಶ್ ನಿರ್ದೇಶಿಸುತ್ತಿದ್ದಾರೆ. ರಮೇಶ್ ಅರವಿಂದ್, ಶರ್ಮಿಳಾ ಮಾಂಡ್ರೆ, ಮೇಘನ ಮೊದಲಾದವರು ಅಭಿನಯಿಸುತ್ತಿದ್ದಾರೆ.