ಸಂಗೀತ ನಿರ್ದೇಶಕ ಪ್ರಕಾಶ್ ಕನ್ನಡಕ್ಕೆ

ಸೋಮವಾರ, 19 ಜನವರಿ 2009 (16:01 IST)
ಈಗ ಕನ್ನಡಕ್ಕೆ ಮತ್ತೊಬ್ಬ ಪರಭಾಷಾ ಸಂಗೀತ ನಿರ್ದೇಶಕನ ಆಗಮನವಾಗುತ್ತಿದೆ. ಹುಡುಗಾಟ ಚಿತ್ರದ ಮೂಲಕ ಜೆಸ್ಸಿ ಗಿಫ್ಟ್, ಸಂಗಮ ಚಿತ್ರದ ಮೂಲಕ ದೇವಿಶ್ರೀಪ್ರಸಾದ್ ಈಗ ಗಣೇಶ್ ಅಭಿನಯದ ಉಲ್ಲಾಸದ ಹೂಮಳೆ ಚಿತ್ರದ ಮೂಲಕ ಜಿವಿ ಪ್ರಕಾಶ್ ಕನ್ನಡಕ್ಕೆ ಬರುತ್ತಿದ್ದಾರೆ.

ಇವರು ಸಂಗೀತ ನಿರ್ದೇಶಿಸಿದ ಮೊದಲ ಚಿತ್ರ ವೆಯಿಲ್. ರಜನಿಯವರ ಅಭಿನಯದ ಕುಚೇಲನ್, ಉಲ್ಲಾಸಂಗಾ ಉತ್ಸಾಹಂಗಾ ಚಿತ್ರಗಳಿಗೂ ಇವರೇ ಸಂಗೀತ ನಿರ್ದೇಶಿಸಿದ್ದು. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ದೇವರಾಜ್ ಪಾಲನ್ ನಿರ್ದೇಶಕರು. ಶ್ರದ್ದಾ ಆರ್ಯ ನಾಯಕಿ.

ತೆಲುಗು ಚಿತ್ರದಲ್ಲಿ ಹಿಟ್ ಆದ ಒಂದೆರಡು ಹಾಡುಗಳ ರಾಗಗಳನ್ನೂ ಬಳಸಲಾಗುತ್ತದೆಯಂತೆ. ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆಯುವ ಪ್ರಕಾಶ್ ಈ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ಮಾತ್ರ ಚಿತ್ರತಂಡ ಬಾಯಿ ಬಿಡಲಿಲ್ಲ.

ವೆಬ್ದುನಿಯಾವನ್ನು ಓದಿ