ಸಕ್ಕರೆಯಿಂದ ಗಣೇಶ್ಗೆ ಹೊಸ ಇಮೇಜ್ ಬರುತ್ತಾ?

ಗುರುವಾರ, 22 ಆಗಸ್ಟ್ 2013 (10:07 IST)
PR
ಆಟೋರಾಜ ಚಿತ್ರದಿಂದ ಗಣೇಶ್ ಇಮೇಜ್ ಸ್ವಲ್ಪ ಬದಲಾಗಿತ್ತು. ಆದರೆ ಈಗ ಸಕ್ಕರೆ ಚಿತ್ರದಲ್ಲಿ ನಟಿಸುತ್ತಿರುವ ಗಣೇಶ್ ಮತ್ತೆ ಹಿಂದಿನ ಇಮೇಜ್ಗೇ ಮರಳುತ್ತಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಚಿತ್ರದ ಟೈಟಲ್ ಕೇಳಿದಾಕ್ಷಣ ಇದು ರೊಮ್ಯಾಂಟಿಕ್ ಲವ್ ಸ್ಟೋರಿ ಎಂಬ ಅರ್ಥ ಬರುವುದು ಸಹಜ. ಟೈಟಲ್ಗೂ ಕಥೆಗೂ ಏನು ಸಂಬಂಧ ಎಂದರೆ ಅದನ್ನು ಈ ರೀತಿ ವಿವರಿಸುತ್ತಾರೆ ಗಣೇಶ್. ಬೇರೆ ಸಿನೆಮಾಗಳಂತೆ ನಾಯಕ ನಾಯಕಿಯ ಪ್ರೀತಿಯನ್ನು ಹುಡುಕುತ್ತಾನೆ. ಇಲ್ಲೂ ನಾಯಕಿಯ ಮನೆಗೆ ಹೋಗುತ್ತಾನೆ, ಆದರೆ ಅಲ್ಲಿ ಪ್ರೇಮಭಿಕ್ಷೆ ಕೇಳುವ ಬದಲು ಸಕ್ಕರೆ ಕೇಳುತ್ತಾನೆ. ಆಗ ನಾಯಕಿ ಡಬ್ ಎಂದು ಬಾಗಿಲು ಮುಚ್ಚಿ ಟೆರೇಸ್ನಿಂದ ತಲೆಮೇಲೆ ಹೂವಿನ ಕುಂಡ ಎತ್ತಿ ಹಾಕುತ್ತಾಳೆ. ಹೀಗೆ ಸಕ್ಕರೆಗೆ, ನನಗೆ ಹಾಗೂ ನಾಯಕಿಗೆ ಸಂಬಂಧ ಬೆಳೆಯುತ್ತದೆ ಎನ್ನುತ್ತಾರೆ.

ಗಣೇಶ್ಗೆ ನಿರ್ದೇಶಕ ಅಭಯ್ಸಿಂಹ ಅವರ ಉತ್ಸಾಹ ಖುಷಿ ನೀಡುತ್ತದಂತೆ. ಮೊದಲರ್ಧ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತದೆ. ಇಂಟರ್ವಲ್ ವೇಳೆಗೆ ಪ್ರೇಕ್ಷಕನ ತಲೆಯ ತುಂಬೆಲ್ಲಾ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ಅದು ಏನು ಎತ್ತ ಎಂದು ತಿಳಿಯುವುದು ಸೆಕೆಂಡ್ ಆಫ್ನಲ್ಲಿ. ಅಭಯ್ ಸಿಂಹ ಈ ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಮಾಡಿದ್ದಾರೆ. ಅದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದರು ಗಣೇಶ್. ಈ ಹಿಂದೆ ಶಿಖಾರಿ ಚಿತ್ರ ನಿರ್ದೇಶಿಸಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅಭಯಸಿಂಹ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕ ಹಾಗೂ ನಟ ಗಣೇಶ್ ಇಬ್ಬರಿಗೂ ಈ ಚಿತ್ರದ ಗೆಲುವು ಅನಿವಾರ್ಯ. ಈ ಚಿತ್ರ ಎಷ್ಟರಮಟ್ಟಿಗೆ ಹೆಸರು ಗಳಿಸುತ್ತದೆ ಎಂಬುದನ್ನು ಕಾದುನೋಡಬೇಕಷ್ಟೇ.

ವೆಬ್ದುನಿಯಾವನ್ನು ಓದಿ