ಕಳೆದ ಕೆಲವು ದಿನಗಳಿಂದ ಕನ್ನಡದ ಪ್ರಸಿದ್ಧ ನಿರ್ದೇಶಕರುಗಳಾದ ಯೋಗರಾಜ್ ಭಟ್ ಮತ್ತು ಸೂರಿ ಅವರ ನಡುವೆ ಕಂಡಿದ್ದ ಜಂಗಿ ಕುಸ್ತಿ ಈಗ ಒಂದು ಹದಕ್ಕೆ ಬಂದು ತಲುಪಿದೆ. ತಣ್ಣಗಾಗಿದೆ. ತಮ್ಮನ್ನು ಭಟ್ಟರ ಕ್ಯಾಂಪಿಗೆ ಸೇರಿದ ನಿರ್ದೇಶಕ ಎಂದು ಎಲ್ಲರು ತಿಳಿದಿದ್ದಾರೆ.
ಆದರೆ ತಾನು ಸ್ವತಂತ್ರ ಮನಸ್ಸಿನ, ಕಾರ್ಯವೈಖರಿಯ ವ್ಯಕ್ತಿತ್ವ ಹೊಂದಿರುವ ನಿರ್ದೇಶಕ. ಭಟ್ಟರು ಎಲ್ಲರನ್ನು ತಮ್ಮ ಶಿಷ್ಯರು ಎಂದು ಹೇಳಿಕೊಲ್ಲುವುದರ ಮೂಲಕ ತಮ್ಮದೊಂದು ಪ್ರಭಾವಳಿಯನ್ನು ಊಹಾಲೋಕವನ್ನು ನಿರ್ಮಿಸಿಕೊಂಡು ಬಿಟ್ಟಿದ್ದಾರೆ. ಆದರೆ ಬಹುತೇಕ ಅವರ ಶಿಷ್ಯರ ಬಳಿ ಅವರ ಕೇಳಿ ನೋಡಿ ಎಂತಹ ಉತ್ತರ ಬರುತ್ತದೆ ಎಂದು ಕಿಡಿ ಕಾರಿದ್ದರು ಇತ್ತೀಚೆಗೆ.
ಎಲ್ಲರ ಯಶಸ್ಸಿಗೂ ತಾವೇ ಕಾರಣ , ತಮ್ಮಿದ ಮಾತ್ರ ಅವರು ಗೆಲ್ಲಲು ಸಾಧ್ಯವಾಯಿತು. ಇಂತಹ ಸಂಗತಿಗಳಿಂದ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಾನು ಭಟ್ಟರ ಕ್ಯಾಪಿಗೆ ಸೇರಿದವನಲ್ಲ, ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ಗುಡುಗಿದ್ದರು ಸೂರಿ. ಈಗ ಅದು ತಣ್ಣಗಾಗಿದೆ ಮತ್ತೆ ಅವರಿಬ್ಬರೂ ಸದ್ಯಕ್ಕೆ ಒಂದಾಗಿದ್ದಾರೆ.
PR
ಈಗ ಇಬ್ಬರು ಒಟ್ಟಿಗೆ ಸೇರಿ ಮಾತನಾಡಿದ್ದಾರೆ. ತಮ್ಮ ತಮ್ಮಲ್ಲಿ ಆದ ಗೊಂದಲಗಳ ಪರಿಹಾರ ಮಾಡಿಕೊಂಡಿದ್ದಾರೆ. ಅವರಿಬ್ಬರ ನಡುವೆ ಗೊಂದಲ ಉಂಟು ಮಾಡಿದ್ದ ವಿಷಯಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ. ಮತ್ತೆ ಈ ಗೆಳೆಯರು ಒಂದಾಗುವ ಮೂಲಕ ಕನ್ನಡ ಚಿತ್ರರಂಗದವರಲ್ಲಿ ಸಮಾಧಾನದ ಉಂಟು ಮಾಡಿದ್ದಾರೆ.
ಅಂತೂ ಇಂತೂ ಸದ್ಯಕ್ಕೆ ಈ ಬಿಸಿ ತಣ್ಣಗಾಗಿದೆ. ಇಬ್ಬರು ಎಚ್ಚರವಾಗಿ ಬಾಂಧವ್ಯದ ಬಗ್ಗೆ ಗಮನ ನೀಡಿದರೆ ಒಳಿತು, ಯಾಕೆಂದ್ರೆ ಒಮ್ಮೆ ಪಾಕ ತಳ ಹತ್ತಿದರೆ ಅದರ ವಾಸನೆ ಹಾಗೆ ಉಳಿದಿರುತ್ತೆ ಎಷ್ಟೇ ಎಚ್ಚರಿಕೆಗಳನ್ನು ವಹಿಸಿದರೂ !