ಹಂಸ ಲೇಖ ಅಮಿತಾಬ್ ಬಚ್ಚನ್ ಸಿನಿಮಾ ನಿರ್ದೇಶನ ?

ಗುರುವಾರ, 13 ಫೆಬ್ರವರಿ 2014 (10:29 IST)
PR
ಕನ್ನಡ ಚಿತ್ರರಂಗದ ಅಪರೂಪದ ಸಂಗೀತ ನಿರ್ದೇಶಕ ಹಂಸಲೇಖ ಅವರು ಈಗಾಗಲೇ ಮುನ್ನೂರು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ. ಅವರು ಸದ್ಯದಲ್ಲೇ ತಮ್ಮ ಹೊಸ ಪ್ರಾಜೆಕ್ಟ್ ಆರಂಭಿಸುತ್ತಿದ್ದಾರೆ. ಅದಕ್ಕೆ ಪೂರಕವಾದ ಕೆಲಸಗಳನ್ನು ಸಹ ಅವರು ಕೈಗೊಂಡಿದ್ದಾರೆ ಎಂದೇ ಹೇಳ ಬಹುದಾಗಿದೆ. ಆ ಚಿತ್ರದ ಹೆಸರು ನಾಡಗೀತ.

ಇದರಲ್ಲಿ ಭಾರತೀಯ ಚಿತ್ರರಂಗದ ಅನೇಕ ಗಣ್ಯಾತಿಗಣ್ಯ ನಟರನ್ನು ಕರೆತರುವ ಯೋಜನೆ ಹೊಂದಿದ್ದಾರೆ ಹಂಸ್ ಅವರು. ಇದು ದೇಶಭಕ್ತಿಯನ್ನು ಒಳಗೊಂಡ ಚಿತ್ರವಾಗಿದೆ. ಇದನ್ನು ಹಂಸಲೇಖ ಅವರೇ ನಿರ್ದೇಶಿಸುತ್ತಿದ್ದಾರೆ.

PR
ರಾಜ್ ಕುಮಾರ್ ಪ್ರಶಸ್ತಿಯನ್ನು ಇತ್ತೀಚೆಗೆ ಅವರು ಸ್ವೀಕರಿಸಿದ ಸಮಯದಲ್ಲಿ ಈ ಸಂಗತಿಯನ್ನು ಹೇಳುತ್ತಾ ಈಗಿನ ಯುವ ಜನಾಂಗದಲ್ಲಿ ದೇಶ ಭಕ್ತಿಯನ್ನು ಬೆಳೆಸಬೇಕು. ನಾನು ನಾಡಗೀತ ಚಿತ್ರವನ್ನು ನಿರ್ದೇಶಿಸ ಹೊರಟಿದ್ದೇನೆ.

ಇದರಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕಾನೇಕ ಬೇರೆ ಭಾಷೆಯ ಕಲಾವಿದರನ್ನು ಸೇರ್ಪಡೆ ಮಾಡುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ತಮಗೆ ದೊರೆತ ಪ್ರಶಸ್ತಿ ಹಣವನ್ನು ದೇಸಿ ಕಾಲೇಜಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲು ನಿರ್ಧರಿಸಿದ್ದಾರೆ ಹಂಸ್.

ವೆಬ್ದುನಿಯಾವನ್ನು ಓದಿ