ಸರಿಗಮಪ ಕನ್ನಡ ಶೋ ಗೆದ್ದ ಚಾಂಪಿಯನ್ ಗಳಿಗೆ ಎಆರ್ ರೆಹಮಾನ್ ಅಭಿನಂದನೆ

ಸೋಮವಾರ, 28 ಫೆಬ್ರವರಿ 2022 (17:40 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ಸರಿಗಮಪ ಹಾಡಿನ ಕಾರ್ಯಕ್ರಮದಲ್ಲಿ ಗೆದ್ದವರಿಗೆ ಸಂಗೀತ ದಿಗ್ಗಜ ಎಆರ್ ರೆಹಮಾನ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಶನಿವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ನೇತೃತ್ವದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾದ ಎಲ್ಲರಿಗೂ ರೆಹಮಾನ್ ಅಭಿನಂದನೆ ಸಲ್ಲಿಸಿದ್ದಾರೆ.

‘ಸರಿಗಮಪ ಗ್ರ್ಯಾಂಡ್ ಫೈನಲ್ ನಲ್ಲಿ ಭಾಗಿಯಾಗಿ ವಿಜೇತರಾದ ಎಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಇಡೀ ಸೀಸನ್ ನಲ್ಲಿ ಅವರಿಗೆ ಜೊತೆಯಾದ ಸನ್ ಶೈನ್ ಆರ್ಕೆಸ್ಟ್ರಾಗೆ ನನ್ನ ಅಭಿನಂದನೆಗಳು’ ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ