ಮತ್ತೆ ಒಂದಾದ ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ಅಂಬರೀಶ್

ಶುಕ್ರವಾರ, 31 ಮೇ 2019 (09:31 IST)
ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಎದುರಾಳಿಗಳಾಗಿದ್ದರಿಂದ ಎರಡೂ ಕುಟುಂಬದವರ ನಡುವೆ ಮಾತಿನ ಸಮರ ಜೋರಾಗಿಯೇ ನಡೆದಿತ್ತು.


ಈಗ ಚುನಾವಣೆ ಮುಗಿದು ಸುಮಲತಾ ಗೆದ್ದೂ ಆಗಿದೆ. ಹೀಗಾಗಿ ರಾಜಕೀಯ ವೈಷಮ್ಯಗಳನ್ನೆಲ್ಲಾ ಮರೆತು ಅಭಿ ಮತ್ತು ನಿಖಿಲ್ ಮತ್ತೆ ಸ್ನೇಹ ಹಸ್ತ ಚಾಚಿದ್ದಾರೆ. ಅಂಬರೀಶ್ ಜನ್ಮ ದಿನದಂದು ಶುಭ ಹಾರೈಸಿದ ನಿಖಿಲ್, ಮೊದಲ ಸಿನಿಮಾ ಬಿಡುಗಡೆಯ ಖುಷಿಯಲ್ಲಿರುವ ಅಭಿಷೇಕ್ ಗೆ ವಿ‍ಶ್‍ ‍ಮಾಡಿದ್ದರು.

ನಿಖಿಲ್ ಹಾರೈಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಭಿ ‘ನಿನ್ನ ಹಾರೈಕೆಯಿಂದ ಖುಷಿಯಾಗಿದೆ. ಮೊದಲ ಸಿನಿಮಾ ಬಿಡುಗಡೆಯಾಗುವಾಗ ಏನು ಆತಂಕವಿರುತ್ತದೆ ಎಂಬ ಅನುಭವ ನಿನಗೂ ಇರುತ್ತದೆ. ನಾವೆಲ್ಲರೂ ಜತೆಯಾಗಿ ಬೆಳೆದು ಕನ್ನಡ ಚಿತ್ರರಂಗ ಒಗ್ಗಟ್ಟಾಗಿದೆ ಎಂದು ಸಾರೋಣ. ರಾಜಕೀಯವಾಗಿ ಏನೇ ಫಲಿತಾಂಶ ಬಂದಿರಬಹುದು. ಆದರೆ ಮಂಡ್ಯ ಜನರ ಒಳಿತಿಗಾಗಿ ಜತೆಯಾಗಿ ಕೆಲಸ ಮಾಡೋಣ’ ಎಂದು ಅಭಿ ಸ್ನೇಹ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ