ಅಣ್ಣ ದರ್ಶನ್ ಸಿನಿಮಾಗೆ ಅಡ್ಡಿ ಮಾಡುವವರ ವಿರುದ್ಧ ತೊಡೆ ತಟ್ಟಿದ ಅಭಿಷೇಕ್ ಅಂಬರೀಶ್

ಶನಿವಾರ, 30 ಜನವರಿ 2021 (10:00 IST)
ಬೆಂಗಳೂರು: ತೆಲುಗಿನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅಡ್ಡಿ ಮಾಡುತ್ತಿರುವವರ ವಿರುದ್ಧ ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ನಟ ಅಭಿಷೇಕ್ ಅಂಬರೀಶ್ ಗುಟುರು ಹಾಕಿದ್ದಾರೆ.


ದರ್ಶನ್ ರನ್ನು ತಮ್ಮ ಅಣ್ಣ ಎಂದೇ ಸಂಬೋಧಿಸುವ ಅಭಿ ನಮ್ಮ ಸಿನಿಮಾ ರಿಲೀಸ್ ಗೆ ಅಡ್ಡಿ ಮಾಡಿದರೆ ಮುಂದೆ ನಿಮ್ಮ ಸಿನಿಮಾಗಳೂ ನಮ್ಮಲ್ಲಿ ಬಿಡುಗಡೆಯಾಗದಂತೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ‘ಇಷ್ಟು ದಿನಗಳ ಎಲ್ಲಾ ರಾಜ್ಯದ ಚಿತ್ರಗಳಿಗೂ ನಮ್ಮ ಕನ್ನಡ ನಾಡಿನಲ್ಲಿ ಎಲ್ಲಾ ತರಹದ ಪ್ರೋತ್ಸಾಹ ನೀಡಿ ಚಿತ್ರ ಬಿಡುಗಡೆಗೆ ನಾವು ಸಹಕಾರ ನೀಡಿದ್ದೇವೆ. ನಾವು ನಿಮಗೆ ಕೊಡುತ್ತಿರುವ ಪ್ರೀತಿ, ಗೌರವವನ್ನು ನಿಮ್ಮಿಂದಲೂ ನಿರೀಕ್ಷೆ ಮಾಡುತ್ತೇವೆ. ನಮ್ಮ ಕನ್ನಡ ಚಿತ್ರಗಳನ್ನು ನೀವು ತಡೆಹಿಡಿದರೆ ನಿಮ್ಮ ಚಲನಚಿತ್ರಗಳನ್ನು ನಾವು ಪ್ರೋತ್ಸಾಹಿಸದೆ ತಡೆ ಹಿಡಿಯಬೇಕಾಗುತ್ತದೆ’ ಎಂದು ಅಭಿ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ