ಪವರ್ ಸ್ಟಾರ್ ಪುನೀತ್ ಗಾಗಿ ದೊಡ್ಡ ನಿರ್ಧಾರ ಕೈಗೊಂಡ ನಟ ಅನಿರುದ್ಧ ಜತ್ಕಾರ್

ಮಂಗಳವಾರ, 8 ಫೆಬ್ರವರಿ 2022 (17:33 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನವನ್ನು ಈಗಲೂ ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ನಟ ಅನಿರುದ್ಧ ಜತ್ಕಾರ್ ದೊಡ್ಡ ನಿರ್ಧಾರವೊಂದನ್ನು ಕೈಗೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿಯಿಂದಾಗಿ ಆರ್ಯವರ್ಧನ್ ಎಂದೇ ಜನಪ್ರಿಯರಾಗಿರುವ ಅನಿರುದ್ಧ ಫೆಬ್ರವರಿ 16 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಪುನೀತ್ ನಿಧನದ ಬೇಸರವನ್ನೇ ಮರೆಯಲಾಗುತ್ತಿಲ್ಲ. ಹೀಗಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಅನಿರುದ್ಧ್ ಹೇಳಿದ್ದಾರೆ.

ಫೆಬ್ರವರಿ 16 ರಂದು ನನ್ನ ಹುಟ್ಟುಹಬ್ಬ ಮತ್ತು 17 ರಂದು ನನ್ನ ವಿವಾಹ ವಾರ್ಷಿಕೋತ್ಸವ. ಪ್ರತೀ ವರ್ಷ ನಾನು ಅಭಿಮಾನಿಗಳೊಂದಿಗೆ ಈ ಎರಡೂ ದಿನವನ್ನು ಕಾಲ ಕಳೆಯುತ್ತಿದ್ದೆ. ಆದರೆ ಪುನೀತ್ ಸರ್ ಅವರು ನಮ್ಮನ್ನೆಲ್ಲಾ ಶಾರೀರಿಕವಾಗಿ ಬಿಟ್ಟು ಹೋಗಿದ್ದಾರೆ, ಆ ದುಃಖ ಇನ್ನೂ ಹೋಗಿಲ್ಲ. ಹಾಗಾಗಿ ಈ ಬಾರಿ ನಾನು ಈ ಎರಡೂ ದಿನವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಅನಿರುದ್ಧ್ ವಿಡಿಯೋ ಮೂಲಕ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ