ಕೊರೋನಾದಿಂದ ಮೃತರಾದವರ ಅಸ್ಥಿ ವಿಸರ್ಜಿಸಿದ ನಟ ಅರ್ಜುನ್ ಗೌಡ

ಭಾನುವಾರ, 13 ಜೂನ್ 2021 (09:54 IST)
ಬೆಂಗಳೂರು: ಕೊರೋನಾ ಪ್ರಕರಣಗಳು ಮಿತಿಮೀರಿದ್ದಾಗ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡಿ ಎಷ್ಟೋ ಜನರ ಪ್ರಾಣ ಉಳಿಸಲು ನೆರವಾಗಿದ್ದ ಯುವ ನಟ ಅರ್ಜುನ್ ಗೌಡ ಈಗ ಮತ್ತೊಂದು ಮಹತ್ಕಾರ್ಯ ಮಾಡಿ ಸುದ್ದಿಯಾಗಿದ್ದಾರೆ.


ತಮ್ಮ ಆಂಬ್ಯುಲೆನ್ಸ್ ನಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಿದ್ದಷ್ಟೇ ಅಲ್ಲದೆ, ಹಲವರ ಮೃತದೇಹಗಳನ್ನು ಮನೆಯವರೇ ಹತ್ತಿರ ಬಾರದೇ ಇದ್ದಾಗ ಖುದ್ದಾಗಿ ಅಂತ್ಯ ಸಂಸ್ಕಾರ ಮಾಡಲು ನೆರವಾಗಿದ್ದರು.

ಅಂತಹ ಮೃತದೇಹಗಳ ಚಿತಾಭಸ್ಮವನ್ನು ತೆಗೆದಿಟ್ಟುಕೊಂಡಿದ್ದ ಅರ್ಜುನ್ ಗೌಡ ಅದೆಲ್ಲವನ್ನೂ ಕಾಶಿಯ ಗಂಗೆಯಲ್ಲಿ ವಿಸರ್ಜಿಸಿದ್ದಾರೆ. ಈ ಮೂಲಕ ಮೃತ ಆತ್ಮಗಳಿಗೆ ತಮ್ಮ ಕೈಲಾದ ರೀತಿಯಲ್ಲಿ ಚಿರಶಾಂತಿ ಒದಗಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ