ಸಾಲದ ಸಂಕಷ್ಟದಲ್ಲಿ ನಟ ದ್ವಾರಕೀಶ್: ಕೋರ್ಟ್ ನಿಂದ ನೋಟಿಸ್

ಭಾನುವಾರ, 12 ಡಿಸೆಂಬರ್ 2021 (16:58 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ದ್ವಾರಕೀಶ್ ಗೆ ಹಳೆಯ ಸಾಲ ಈಗ ಉರುಳಾಗಿ ಪರಿಣಮಿಸಿದೆ. ‘ಚಾರುಲತಾ’ ಸಿನಿಮಾ ನಿರ್ಮಾಣದ ವೇಳೆ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರಿಂದ ಪಡೆದಿದ್ದ 50 ಲಕ್ಷ ರೂ.ಗಳ ಸಾಲ ವಾಪಸ್ ಮಾಡಿಲ್ಲ ಎಂಬ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಈ ಬಗ್ಗೆ ಕೋರ್ಟ್ ಒಂದು ತಿಂಗಳೊಳಗಾಗಿ ದ್ವಾರಕೀಶ್ 52 ಲಕ್ಷ ರೂ.ಗಳನ್ನು ಕೆಸಿಎನ್ ಚಂದ್ರಶೇಖರ್ ಅವರಿಗೆ ನೀಡಲು ಗಡುವು ನೀಡಿದೆ.

ಈ ಮೊದಲು ದ್ವಾರಕೀಶ್ ಸಾಲ ವಾಪಸ್ ಮಾಡಲು ಚೆಕ್ ನೀಡಿದ್ದರು. ಆದರೆ ನಂತರ ಇಲ್ಲ ಎಂದಿದ್ದರು. ಈ ವಿಚಾರ 2019 ರಲ್ಲೇ ಕೋರ್ಟ್ ಮೆಟ್ಟಿಲೇರಿತ್ತು. ಆಗ ಕಳೆ ನ್ಯಾಯಾಲಯ ದ್ವಾರಕೀಶ್ ಗೆ ಹಣ ಮರಳಿಸಲು ಸೂಚಿಸಿತ್ತು. ಅದನ್ನು ಪ್ರಶ್ನಿಸಿ ದ್ವಾರಕೀಶ್ ಸೆಷನ್ಸ್ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಬಳಿಕ ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ