ಪ್ರೀತಿಸಿ ಮೋಸ.. ಹುಚ್ಚ ವೆಂಕಟ್ ಆರೋಪದ ಬಗ್ಗೆ ನಟಿ ಉತ್ತರ

ಸೋಮವಾರ, 19 ಜೂನ್ 2017 (08:31 IST)
ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಜೊತೆಗಿದ್ದ ರಚನಾ ನನ್ನನ್ನ ಪ್ರೀತಿಸಿ ಈಗ ಮದುವೆಯಾಗುವುದಿಲ್ಲ ಎನ್ನುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚನಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
 

ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ರಚನಾ, ರಿಯಾಲಿಟಿ ಶೋನಲ್ಲಿ ನಾನು ಹುಚ್ಚ ವೆಂಕಟ್ ಜೊತೆ ಇದ್ದೆ. ಪ್ರೀತಿ ಮಾಡು ಎಂದು ಅವರು ಹಲವು ಬಾರಿ ಕೇಳಿದಾಗಲೂ ನಾನು ಆಗುವುದಿಲ್ಲವೆಂದೇ ಉತ್ತರ ಕೊಟ್ಟಿದ್ದೇನೆ. ಅವರನ್ನ ಲವ್ ಮಾಡುವುದಾಗಿ, ಮದುವೆಯಾಗಲಿ ಸಾಧ್ಯವಿಲ್ಲ. ಈಗಳು ನಾನು ಮನಸ್ಸು ಬದಲಿಸುವುದಿಲ್ಲ. ಅವರು ಏನೇ ಪ್ರೂಫ್ ಕೊಟ್ಟರೂ ಅದು ನನಗೆ ಎಫೆಕ್ಟ್ ಆಗುವುದಿಲ್ಲ ಎಂದು ಹೇಳಿದ್ದಾರೆ. ನಾನು ಕನಸ್ಸು ಮನಸ್ಸಿನಲ್ಲೂ ಈ ರೀತಿ ಆಗುತ್ತದೆ ಎಂದು ಊಹಿಸಿರಲಿಲ್ಲ ೆಂದಿರುವ ನಟಿ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಈ ಮಧ್ಯೆ, ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಹುಚ್ಚ ವೆಂಕಟ್ ನಿನ್ನೆ ರಾತ್ರಿಯೇ ಮಲ್ಲಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಿಡುಗಡೆ ನಂತರವೂ ರಚನಾ ನನ್ನನ್ನ ಪ್ರೀತಿಸುವುದಾಗಿ ಹೇಳಿ ಈಗ ನಿರಾಕರಿಸಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ