ಕನ್ನಡ ಚಿತ್ರರಂಗದ ಬಹಳ ಪ್ರತಿಭಾವಂತ ನಿರ್ದೇಶಕ ಬಾಬು ರಾಜೇಂದ್ರ ಸಿಂಗ್. ಇವರು ಕನ್ನಡಕ್ಕೆ ಭಿನ್ನವಾದ ಚಿತ್ರಗಳನ್ನು ನೀಡಿದ್ದಾರೆ. ಸಿಂಗ್ ಬಾಬು ಎನ್ನುವ ಹೆಸರಿನಿಂದ ಗುರುತಿಸಲ್ಪಡುವ ಬಾಬು ಅವರ ಪುತ್ರ ಆದಿತ್ಯ ಸಿಂಗ್ ಹೀರೋಗೆ ಬೇಕಾದ ಚಾರ್ಮ್ , ಮೈಕಟ್ಟು, ಪ್ರತಿಭೆ ಎಲ್ಲವನ್ನು ಹೊಂದಿದ್ದರು ಸಹಿತ ಅದೃಷ್ಟ ಹೊಂದಿರದ ಕಾರಣದಿಂದ ಆದಿಗೆ ಹೇಳಿಕೊಳ್ಳುವ ಗೆಲುವು ಸಿಗಲಿಲ್ಲ.
ಆದರು ಸಹಿತ ಈತ ತನ್ನ ಪ್ರತಿಭೆ ತೋರಲು ಅಗತ್ಯ ಇರುವ ಅಂಶಗಳಿಗೆ ಆದ್ಯತೆ ನೀಡುತ್ತಲೇ ಇದ್ದಾರೆ. ಆದಿತ್ಯ ಮತ್ತು ರಾಗಿಣಿ ದ್ವಿವೇದಿ ಈಗ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಮೊದಲು ಈ ಜೋಡಿ ವಿಲನ್ ಚಿತ್ರದಲ್ಲಿ ಒಂದಾಗಿ ತೆರೆ ಹಂಚಿಕೊಂಡಿದ್ದರು. ಆದರೆ ಪುನಃ ಇಬ್ಬರು ಮತ್ತೊಂದು ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಇವರು ನಟನೆಯ ಹೊಸ ಚಿತ್ರದ ಕೆಲಸ ನವೆಂಬರ್ ತಿಂಗಳ ಮಧ್ಯದಲ್ಲಿ ಆರಂಭ ಆಗುವ ಸಾಧ್ಯತೆ ಇದೆ.
ಪ್ರಸ್ತುತ ನಟಿ ರಾಗಿಣಿ ದ್ವಿವೇದಿ ಅಮ್ಮ ಮತ್ತು ರಣಚಂಡಿ ಚಿತ್ರಗಳ ಕೆಲಸದಲ್ಲಿ ಬ್ಯುಸಿ ಆಗಿದ್ದಾಳೆ. ಆದಿತ್ಯ ಹೊಸ ಚಿತ್ರಕ್ಕೆ ಅಗತ್ಯ ಇರುವಂತೆ ತಮ್ಮ ಬಾಡಿಯನ್ನು ಶೇಪ್ ಮಾಡಿಕೊಳ್ಳುವತ್ತ ಗಮನ ಕೊಟ್ಟಿದ್ದಾರೆ. ಸಧ್ಯದಲ್ಲೇ ಈತ ಸುಮನ್ ಕಿತ್ತೂರ್ ಮತ್ತು ರವಿ ಶ್ರೀವಾಸ್ತವ ಅವರ ನಿರ್ದೇಶನದ ಕೆಲಸಗಳಲ್ಲಿ ಅಭಿನಯಿಸಲು ಸಿದ್ಧತೆ ನಡಿಸಿದ್ದಾರೆ. ಎಲ್ಲವು ನೆನೆದಂತೆ ಆದರೆ ಅಧಿಕ ಅವಕಾಶಗಳು ಆದಿತ್ಯರನ್ನು ಹುಡುಕಿಕೊಂಡು ಬರುತ್ತಿದೆ ಎನ್ನುವ ಮಾತು ನಿಜವಾದಂತೆ.. ಹಾಗೆ ಆಗಲೆಮ್ಬುದು ನಮ್ಮ ಹಾರೈಕೆ.