ಉಪ್ಪಿನಂಗಡಿಗೆ ಐಶ್ವರ್ಯಾ ರೈ ಬಂದಿದ್ದೇಕೆ? ಇಲ್ಲಿದೆ ನೋಡಿ ಫೋಟೋ..!

ಭಾನುವಾರ, 9 ಏಪ್ರಿಲ್ 2017 (07:57 IST)
ಮಂಗಳೂರು: ಕನ್ನಡತಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತವರಿಗೆ ಬಂದಿದ್ದಾರೆ. ಮೂಲತಃ ಮಂಗಳೂರಿನವರಾದ ಐಶ್ವರ್ಯಾ ಉಪ್ಪಿನಂಗಡಿಯ ಗಯಾಪದ ಸಹಸ್ರ ಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

 

ಇತ್ತೀಚೆಗಷ್ಟೇ ನಿಧನರಾದ ತಂದೆ ಕೃಷ್ಣರಾಜ ರೈ ಅವರ ಅಪರ ಕ್ರಿಯೆಗಳನ್ನು ನೆರವೇರಿಸಲು ಅವರು ತವರೂರಿನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪುತ್ರಿ ಆರಾಧ್ಯ ಜತೆಗಿದ್ದಳು.

 
ಐಶ್ವರ್ಯಾ ಭೇಟಿ ಹಿನ್ನಲೆಯಲ್ಲಿ ದೇವಾಲಯದಲ್ಲಿ ಪೊಲೀಸ್ ಬಿಗಿ ಭದ್ರತೆಯಿತ್ತು. ಬಾಲಿವುಡ್ ಬೆಡಗಿಯನ್ನು ನೋಡಲು ದೇವಾಲಯದ ಸುತ್ತ ಜನ ಸಮೂಹವೇ ಸೇರಿತ್ತು. ಐಶ್ ಫೋಟೋ ತೆಗೆಯಲು ಅಭಿಮಾನಿಗಳು ಮುಗಿಬಿದ್ದಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ