ಎನೈ ಅರಿಂದಾಲ್ ಚಿತ್ರದ ಬಳಿಕ ಸುಮಾರು ಮೂರು ತಿಂಗಳುಗಳ ಕಾಲ ವಿಶ್ರಾಂತಿಯನ್ನು ಪಡೆಯಲು ನಿರ್ಧರಿಸಿದ್ದಾರೆ ತಮಿಳು ಸ್ಟಾರ್ ನಟ ಅಜಿತ್. ಆ ಸಮಯದಲ್ಲಿ ನೋ ಶೂಟಿಂಗ್, ಬರಿ ಹೆಂಡತಿ, ಮನೆ ಮತ್ತು ಮಕ್ಕಳು. ಈ ನಿರ್ಧಾರಕ್ಕೆ ಬರುವ ಹಿಂದೆ ಒಂದು ಕಾರಣವಿದೆ. ಅವರು ಈಗ ಎರಡನೇ ಮಗುವಿಗೆ ತಂದೆ ಆಗುತ್ತಿದ್ದಾರೆ.
ಆ ಕಾರಣದಿಂದ ತಮ್ಮ ಸಮಯವನ್ನು ಕುಟುಂಬಕ್ಕೆ ಮೀಸಲಿಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ ಅಜಿತ್. ಎನೈ ಅರಿಂದಾಲ್ ಈ ತಿಂಗಳ 29 ಕ್ಕೆ ಬಿಡುಗಡೆ ಆಗುತ್ತಿದೆ. ಇದನ್ನು ಗೌತಮ್ ಮೆನನ್ ನಿರ್ದೇಶಿಸಿದ್ದಾರೆ. ಶ್ರೀ ಸಾಯಿ ರಾಮ್ ಪಿಕ್ಚರ್ಸ್ ಪತಾಕೆಯ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಚಿತ್ರವನ್ನು ಪ್ರಸಿದ್ಧ ನಿರ್ಮಾಪಕ ಎ ಎಂ ರತ್ನಂ ತುಂಬಾ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
ಚೆನ್ನೈನಲ್ಲಿ ಬಿಡುಗಡೆ ಹಕ್ಕನ್ನು ಎಂ ಎ ಎಂಟರ್ ಪ್ರೈಸಸ್ ಹೊಂದಿದೆಯಂತೆ. ಅಜಿತ್ ಅವರ ಮತ್ತೊಂದು ಚಿತ್ರವನ್ನು ಸಹಿತ ಎ ಎಂ ರತ್ನಂ ಅವರೇ ನಿರ್ಮಿಸುತ್ತಾರೆ ಎನ್ನುವ ಸುದ್ದಿ ಇದೆ. ಅದಕ್ಕೆ ಪೂರಕ ಕಥೆ ಹುಡುಕಾಟ ನಡೆಸಲಾಗಿದೆಯಂತೆ.ಸಮಂತ ಹೀರೋಯಿನ್ ಆಗಿ ನಿಕ್ಕಿ ಆಗಿದ್ದಾಳಂತೆ. ಒಟ್ಟಾರೆ ಈಗ ಅಜಿತ್ ರೆಸ್ಟ್ ಮೂಡ್ ನಲ್ಲಿದ್ದಾರೆ, ಅವರ ಪತ್ನಿಗೆ ಸುಖ ಪ್ರಸವಾಗಲಿ ಎನ್ನುವ ಹಾರೈಕೆ ಪತ್ರಿಕೆಯದ್ದಾಗಿದೆ.