ಪವನ್ ಒಡೆಯರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಟಾಲಿವುಡ್‌ನ ಅಲ್ಲೂ ಅರ್ಜುನ್

ಮಂಗಳವಾರ, 28 ಏಪ್ರಿಲ್ 2015 (10:46 IST)
ಕನ್ನಡದ ಪ್ರತಿಭಾವಂತ ನಿರ್ದೇಶಕ ಪವನ್ ವಡೆಯರ್ ಅವರ ಟೈಮ್ ಚೆನ್ನಾಗಿದೆ. ಮುಖ್ಯವಾಗಿ ಅವರ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗದೆ ವಿಸ್ತಾರಗೊಳ್ಳುತ್ತಿದೆ ಅದೇ ಸಂತೋಷದ  ಸಂಗತಿಯಾಗಿದೆ. ಈಗ ಬಂದಿರುವ ಸುದ್ದಿ ಏನೆಂದರೆ  ಪವನ್ ಈಗ ತೆಲುಗು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರನ್ನು ತೆಲುಗು ನಿರ್ಮಾಪಕರು ಕಾಂಟಾಕ್ಟ್ ಮಾಡಿ ತಮ್ಮ ಚಿತ್ರವನ್ನು ನಿರ್ದೇಶನ ಮಾಡಲು ಕೇಳಿದ್ದಾರಂತೆ. ಆ ಚಿತ್ರದ ಹೀರೋ ಅಲ್ಲೂ ಅರ್ಜುನ್. ಈ ನಿರ್ಮಾಪಕ ಈಗಾಗಲೇ ಪವನ್ ನಿರ್ದೇಶನದ ಗೋವಿಂದಾಯ ನಮಃ ತೆಲುಗು  ರೀಮೇಕ್ ಆದ ಲಗಪತಿ ಬಾಬು ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ತೆಲುಗು ಚಿತ್ರಕ್ಕೂ ಪವನ್ ಆಕಶನ್ ಕಟ್ ಹೇಳಿದ್ದರು. 
ಈ ಹೊಸ ಚಿತ್ರದ ಕೆಲಸ ಆರಂಭವಾಗಲಿದೆ ಎನ್ನುವ ಸಂಗತಿ ಅಧಿಕೃತ ಮೂಲಗಳಿಂದ ಹೊರ ಬಂದಿದೆ. ಹ್ಯಾಟ್ರಿಕ್ ಯಶಸ್ವಿ ಪಡೆದ  ನಿರ್ದೇಶಕ ಪವನ್. ಅವರ ನಿರ್ದೇಶನದ ಯಶ್ ಅಭಿನಯದ ಗೂಗ್ಲಿ, ಕೋಮಲ್ ಕುಮಾರ್ ಅಭಿನಯದ ಗೋವಿಂದಾಯ ನಮಃ ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ ರಣವಿಕ್ರಮ ಯಶಸ್ವಿ ಆಗಿದೆ. ಈಗ  ತಮಿಳು ಸೂಪರ್ ಸ್ಟಾರ್ ರಜನಿ ಅವರು ಸಹಿತ ಕರೆ ಕಳಿಸಿದ್ದು ಆ ಚಿತ್ರ ಯಾವಾಗ ಆರಂಭವಾಗುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಸಧ್ಯಕ್ಕೆ ಅಲ್ಲೂ ಅರ್ಜುನ್ ಚಿತ್ರ ನಿರ್ದೇಶಿಸುತ್ತಾರೆ ಎನ್ನುವುದು ಮಾತ್ರ ಈಗ ತಿಳಿದು ಬಂದ ಸಂಗತಿಯಾಗಿದೆ. 

ವೆಬ್ದುನಿಯಾವನ್ನು ಓದಿ