ಕಾಕತೀಯ ರಾಜರ ವೈಭವ ಸಾರುವ ಚಿತ್ರ ರುದ್ರಮದೇವಿ. ಅದರಲ್ಲಿ ಅನುಷ್ಕಾ ಶೆಟ್ಟಿ ಕಾಕತೀಯ ಪ್ರಸಿದ್ಧ ರಾಣಿ ರುದ್ರಮದೇವಿ ಪಾತ್ರಧಾರಿ ಆಗಿದ್ದಾಳೆ. ಆಕೆಯ ಜೊತೆ ನಟ ಅಲ್ಲೂ ಅರ್ಜುನ್ ಗೊನಗನ್ನಾರೆಡ್ಡಿ ಅಂದರೆ ರುದ್ರಮದೇವಿ ಪತಿಯ ಪಾತ್ರಧಾರಿ ಆಗಿದ್ದಾರೆ. ಈ ಚಿತ್ರವನ್ನು ಗುಣ ಶೇಖರ್ ಅವರು ನಿಮಿಸಿದ್ದಾರೆ. ಈ ಸಿನಿಮಾ ಗೆಲುವು ನಿರ್ಮಾಪಕ ಹಾಗೂ ನಿರ್ದೇಶಕ ಎರಡು ಸ್ಥಾನ ಹೊಂದಿರುವ ಗುಣಶೇಖರ್ ಅವರಿಗೆ ಅತ್ಯಗತ್ಯವಾಗಿದೆ ಎಂದೇ ಹೇಳ ಬಹುದಾಗಿದೆ. ಈ ಚಿತ್ರದಲ್ಲಿ ಅನುಷ್ಕ ಪಾತ್ರಕ್ಕಿಂತ ಅಲ್ಲೂ ಅರ್ಜುನ್ ಪಾತ್ರದ ಕಡೆಗೆ ಹೆಚ್ಚಿನ ಗಮನ ನೀಡಿದ್ದಾರೆ ಗುಣಶೇಖರ್. ಏಕೆಂದರೆ ಈ ಸ್ಟೈಲಿಶ್ ಸ್ಟಾರ್ ಅಲ್ಲೂ ಅರ್ಜುನ್ ಅವರ ಫಾಸ್ಟ್ ಲುಕ್ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ.
ಅನುಷ್ಕ ಜೋಡಿಯಾಗಿ ಚಾಲುಕ್ಯ ದೊರೆ ವೀರಭದ್ರ ಪಾತ್ರದಲ್ಲಿ ರಾಣ ದಗ್ಗುಬಾಟಿ ಅವರು ನಟಿಸುತ್ತಿದ್ದಾರೆ. ಕೇವಲ ಅನುಷ್ಕ ಮಾತ್ರವಲ್ಲ ಈ ಚಿತ್ರದ ಇನ್ನಿತರ ಪಾತ್ರಗಳಿಗೂ ಸಹಿತ ಮೇಕಿಂಗ್ ವಿಷಯದಲ್ಲಿ ಸರಿಯಾದ ನ್ಯಾಯ ಒದಗಿಸಿರುವ ಬಗ್ಗೆ ಗುಣಶೇಖರ್ ಟೀಮ್ ನಿಂದ ಕೇಳಿ ಬರುತ್ತಿರುವ ಸುದ್ದಿಯಾಗಿದೆ. ಕೃಷ್ಣಂ ರಾಜು, ಸುಮನ್, ಪ್ರಕಾಶ್ ರಾಜ್, ನಿತ್ಯಾ ಮೆನನ್, ಕ್ಯಾಥರೀನ್, ಪ್ರಭು ಮುಂತಾದವರು ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಇದು ಭಾರತದ ಮೊಟ್ಟಮೊದಲ ಐತಿಹಾಸಿಕ ತ್ರಿಡಿ ಸಿನಿಮಾ ಆಗಿದೆ.