ಅಂಬರೀಷ ಚಿತ್ರದಲ್ಲಿ ನಟಿಸಿದ ಅಂಬರೀಷ್...

ಗುರುವಾರ, 24 ಏಪ್ರಿಲ್ 2014 (11:50 IST)
ಅನಾರೋಗ್ಯದ ಕಾರಣದಿಂದ ಸಿಂಗಾಪೂರ್ ಗೆ ತೆರಳಿದ್ದ ಡಾ. ಅಂಬರೀಶ್ ದಿ ರೆಬಲ್ ಸ್ಟಾರ್. ಕರ್ನಾಟಕ ವಸತಿ ಸಚಿವ ಅಂಬರೀಶ್ ಈಗ ತಾವು ಅರ್ಧದಲ್ಲಿ ನಿಲ್ಲಿಸಿದ್ದ ಅಂಬರೀಶ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಚಿತ್ರವನ್ನು ಮಹೇಶ್ ಸುಖಧರೆ ನಿರ್ದೇಶನ ಮಾಡುತ್ತಿದ್ದಾರೆ. ಅಂಬರೀಶ ಚಿತ್ರಕ್ಕೆ ಸಂಬಂಧಪಟ್ಟಂತೆ ಅಂತಿಮ ಹಂತದ ಕೆಲಸಗಳು ನಡೆಯ ಬೇಕಿದೆ. ಡಾ. ಅಂಬಿ ತಮ್ಮ ಭಾಗ ಚಿತ್ರೀಕರಣ ಪೂರ್ಣ ಮಾಡಿದ್ದಾರೆ.

ಈ ಚಿತ್ರಕ್ಕೆಂದು ಅವರು ಬಿಟ್ಟಿದ್ದ ಮೀಸೆಯನ್ನು ಯಾವ ಕಾರಣಕ್ಕೂ ಶೇವ್ ಮಾಡಿರಲಿಲ್ಲ. 50 ಕ್ಕೂ ಅಧಿಕ ದಿನಗಳ ಆ ಮೀಸೆಯನ್ನು ಕಾಪಾಡಿಕೊಂಡಿದ್ದು ತಮ್ಮ ಬಹುನಿರೀಕ್ಷಿತ ಚಿತ್ರ ಅಂಬರೀಶಕ್ಕೆ.  ಸಿಂಗಾಪೂರ್ ನಿಂದ ಬಂಡ ಬಳಿಕ ಅಂಬಿ ಅವರು ಮಂಡ್ಯದಲ್ಲಿ ರಮ್ಯ ಪರವಾಗಿ ಹಾಗು ಬೆಂಗಳೂರು   ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನಂದನ್  ನಿಲೇಕಣಿಗಾಗಿ   ಪ್ರಚಾರ ನಡೆಸಿದರು ಲೋಕಸಭಾ ಚುನಾವಣೆಗಾಗಿ.

ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತ ರಾಮ್,  ತುಳಸಿ, ಶರತ್ ಲೋಹಿತಾಶ್ವ ಮುಂತಾದವರು ನಟಿಸಿದ್ದಾರೆ. ಸತ್ಯನಾರಾಯಣ ಕ್ಯಾಮರ, ಚಿಂತನ ಡೈಲಾಗ್ , ರವಿವರ್ಮ ಸಾಹಸ ಈ ಚಿತ್ರಕ್ಕಿದೆ.  

ವೆಬ್ದುನಿಯಾವನ್ನು ಓದಿ