ಮಿಸ್ಟರ್ ಐರಾವತ ಸಿನಿಮಾದ ಬಳಿಕ ದರ್ಶನ್ ಅಭಿನಯಿಸುತ್ತಿರುವ ಸಿನಿಮಾದ ಜಗ್ಗುದಾದ. ಸಿನಿಮಾದ ಶೂಟಿಂಗ್ ಭರದಲ್ಲಿ ಸಾಗುತ್ತಿದ್ದು, ಮೊನ್ನೆ ಈ ಸಿನಿಮಾದ ಶೂಟಿಂಗ್ ಸ್ಪಾಟ್ ಗೆ ಅಂಬರೀಶ್ ಅವರು ಆಗಮಿಸಿದ್ದರು. ಅದು ಕೂಡ ಸಂಪ್ರೈಸ್ ವಿಸಿಟ್ ಅಂತೆ. ಅಂಬಿಯವರನ್ನು ನೋಡಿದ್ದೇ ತಡ ಸಿನಿಮಾ ತಂಡ ಫುಲ್ ಖುಷ್. ಅಲ್ಲದೇ ಕೆಲ ಹೊತ್ತು ಸೆಟ್ ನಲ್ಲೇ ಕಳೆದ ಅಂಬರೀಶ್ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ ಜಗ್ಗುದಾದ ಸಿನಿಮಾದ ಬಗ್ಗೆಯೂ ತಿಳ್ಕೊಂಡ್ರಂತೆ.