ಮಹಾಕಾಳಿ ಚಿತ್ರದ ನಂತರ ಮಹೇಂದರ್ ಅವರು ಈಗ ಪಾಪು ಚಿತ್ರದ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ. ಈ ಚಿತ್ರ ಬಿಜಿಎಸ್ ಗ್ಲೋಬಲ್ ವಿಲೇಜ್ ನಲ್ಲಿ ನಡೆಯುತ್ತಿದೆ. ಇದನ್ನು ಗಂಗಹನುಮಯ್ಯ ಬಿಪಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅವರು ತಮ್ಮ ಚಿತ್ರದ ಚಿತ್ರೀಕರಣ ಗ್ಲೋಬಲ್ ವಿಲೇಜ್ ನಲ್ಲಿ ನಡೆಸಲು ಅನುಮತಿ ಪಡೆದ ಕಾರಣ ವಿಶೇಷವಾಗಿ ಈ ಚಿತ್ರದ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ.
ಶ್ರೀನಗರ ಕಿಟ್ಟಿ, ರಂಗಾಯಣ ರಘು , ವೀಣಾ ಸುಂದರ್, ಪವನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಅನೇಕ ಸನ್ನಿವೇಶಗಳನ್ನು ನಾಗರಬಾವಿಯಲ್ಲಿ ಚಿತ್ರೀಕರಣ ಮಾಡಲಾಯಿತು. ಈ ಚಿತ್ರದ ನಿರ್ದೇಶನದಲ್ಲಿ ಡಿಫರೆಂಟ್ ಡ್ಯಾನಿ ಸಹ ಪಾಲುದಾರರಾಗಿದ್ದಾರೆ.
ಈ ಚಿತ್ರಕಥೆ ಎಸ್ ಮಹೇಂದರ್ ಅವರ ಬದುಕಿನ ಕಥಾ ಹಂದರದ ಎಳೆಯನ್ನು ಹೊಂದಿದೆ ಎಂದು ಗಾಂಧಿನಗರಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಜಗದೀಶ್ ವಾಲಿ ಅವರ ಕ್ಯಾಮರ, ಅರ್ಜುನ್ ಸರ್ಜಾ ಅವರ ಸಂಗೀತ, ಕೆ ಎಂ ಪ್ರಕಾಶ್ ಅವರ ಸಂಕಲನ, ಇಸ್ಮೈಲ್ ಕಲಾ ನಿರ್ದೇಶನ ಮತ್ತು ಮುರಳಿ ಅವರ ಕೊರಿಯಾಗ್ರಫಿಯನ್ನು ಪಾಪು ಚಿತ್ರ ಹೊಂದಿದೆ.