ಅಂದು ವಿಷ್ಣುವರ್ಧನ್ ಜೊತೆ, ಇಂದು ಅನಿರುದ್ಧ್ ಜೊತೆ! ಮತ್ತೆ ‘ಸೂರ್ಯವಂಶ’ ಮಾಡಲಿರುವ ಎಸ್. ನಾರಾಯಣ್

ಗುರುವಾರ, 8 ಡಿಸೆಂಬರ್ 2022 (09:00 IST)
WD
ಬೆಂಗಳೂರು: ಎಸ್. ನಾರಾಯಣ್ ಎಂದರೆ ಸೂರ್ಯವಂಶ ಸಿನಿಮಾ ನೆನಪಾಗುತ್ತದೆ. ಕಲಾ ಸಾಮ್ರಾಟ್ ಮತ್ತು ಸಾಹಸಸಿಂಹ ಡಾ. ವಿಷ್ಣುವರ್ಧನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಸಿನಿಮಾ ಇಂದಿಗೂ ಸೂಪರ್ ಹಿಟ್.

ಇದೇ ಟೈಟಲ್ ಇಟ್ಟುಕೊಂಡು ಈಗ ಎಸ್. ನಾರಾಯಣ್ ಮತ್ತೊಂದು ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಬಾರಿ ಅವರು ಸೂರ್ಯವಂಶ ಟೈಟಲ್ ನ ಧಾರವಾಹಿಯೊಂದನ್ನು ರಚಿಸಿ, ನಿರ್ದೇಶನ ಮಾಡಲಿದ್ದಾರೆ.

ವಿಶೇಷವೆಂದರೆ ಅಂದು ವಿಷ್ಣು ಜೊತೆಗೆ ಮಾಡಿದ್ದ ಸೂರ್ಯವಂಶವನ್ನು ಇಂದು ಅವರ ಮಗನ ಸಮಾನ ಅಳಿಯ ಅನಿರುದ್ಧ್ ಜತ್ಕಾರ್ ಅವರ ಜೊತೆಗೆ ಮಾಡಲಿದ್ದಾರೆ. ಈ ಧಾರವಾಹಿಯಲ್ಲಿ ಎಸ್.ನಾರಾಯಣ್ ಮತ್ತು ಅನಿರುದ್ಧ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಈ ಮೊದಲು ಅನಿರುದ್ಧ್ ಜೊತೆ ಜೊತೆಯಲಿ ಧಾರವಾಹಿಯಲ್ಲಿ ವಿವಾದವಾಗಿ ಅವರನ್ನು ನಿರ್ಮಾಪಕ ಆರೂರು ಜಗದೀಶ್ ಮತ್ತು ನಿರ್ಮಾಪಕರ ಸಂಘದ ಸದಸ್ಯರು ಬ್ಯಾನ್ ಮಾಡುವುದಾಗಿ ಘೋಷಿಸಿದ್ದರು. ಇದೀಗ ಅನಿರುದ್ಧ್ ಹೊಸ ಪ್ರಾಜೆಕ್ಟ್ ಮೂಲಕ ಎಲ್ಲರ ಟೀಕೆಗೆ ಉತ್ತರ ನೀಡುತ್ತಿದ್ದಾರೆ. ಅವರ ಅಭಿಮಾನಿಗಳೂ ತಮ್ಮ ನೆಚ್ಚಿನ ನಟನನ್ನು ಸ್ವಾಗತಿಸಲು ರೆಡಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ