ಕಿರುತೆರೆ ಪ್ರಪಂಚಕ್ಕೆ ಅಡಿ ಇಟ್ಟ ಕನ್ನಡದ ಎ.ಆರ್.ರಹಮಾನ್ ಅರ್ಜುನ್ ಜನ್ಯ

ಗುರುವಾರ, 30 ಜುಲೈ 2015 (10:26 IST)
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಸಂಗೀತ ನಿರ್ದೇಶನದ ಮೂಲಕ ಮನಗೆದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.ಕನ್ನಡದ ಎ ಆರ್ ರಹಮಾನ್ ಎನ್ನುವ ಅಗ್ಗಳಿಕೆ ಪಡೆದ ಈ ಅಪರೂಪದ ಪ್ರತಿಭೆ ಕನ್ನಡ ಸಿನಿರಂಗಕ್ಕೆ  ಹೊಸತನಗಳಿಂದ ಕೂಡಿದ ಸಂಗೀತ ಉಣಬಡಿಸಿದ  ಮಹಾನ್ ಸಾಧಕ ಅರ್ಜುನ್ ಜನ್ಯ ಅವರು ಈಗ ಕಿರುತೆರೆಗೆ ಬಂದಿದ್ದಾರೆ. ಸಾಮಾನ್ಯವಾಗಿ ಕಿರುತೆರೆಯಲ್ಲಿ ಅವರು ಯಾವುದೋ ಒಂದು ಸಿನಿಮಾದ ಬಗ್ಗೆ ನಡೆಯುವ ಮಾತುಕತೆಗೆ ಬಂದು ಹೋಗಿರುವುದು ಎಲ್ಲರಿಗೂ ಗೊತ್ತಿದೆ, ಆದರೆ ಈಗ ರಿಯಾಲಿಟಿ ಷೋ ಮೂಲಕ ಅವರು ಹೆಚ್ಚುಕಾಲ ಕಿರುತೆರೆಯ ವೀಕ್ಷಕರ ಜೊತೆ ಇರುತ್ತಾರೆ. ಜೀ ಕನ್ನಡವಾಹಿನಿಯ ಪ್ರತಿಷ್ಠಿತ ಕಾರ್ಯಕ್ರಮ ಲಿಟ್ಲ್ ಚಾಪ್ಸ್ ನಲ್ಲಿ ಅವರು ತೀರ್ಪುಗಾರರಾಗಿದ್ದಾರೆ. 
 ಈ ಕಾರ್ಯಕ್ರಮ ಆಗಸ್ಟ್ 1 ರಿಂದ ಆರಂಭವಾಗಲಿದೆ. ಅರ್ಜುನ್ ಜನ್ಯ ಅವರೊಂದಿಗೆ ಹಾಡುಗಾರ ರಾಜೇಶ್ ಕೃಷ್ಣನ್ ಮತ್ತು ವಿಜಯ್ ಪ್ರಕಾಶ್ ಅವರು ಸಹಿತ ತೀರ್ಪುಗಾರಾಗಿದ್ದಾರೆ. ಈ ಮೊದಲು ರಾಜೇಶ್ ಮತ್ತು ವಿಜಯ್ ಈ ಕಾರ್ಯಕ್ರಮದ ಜಡ್ಜ್ ಗಳಾಗಿದ್ದರು. ಆದರೆ ಈಗ ಅದೂ ಮೊಟ್ಟ ಮೊದಲ ಬಾರಿಗೆ ಅರ್ಜುನ್ ಅವರು ಕಿರುತೆರೆಯಲ್ಲಿ ಕಾರ್ಯಕ್ರಮಕ್ಕೆ ಸಾರಥ್ಯ ವಹಿಸುತ್ತಿದ್ದಾರೆ. ಅವರ ಈ ಪಯಣ ಸುಗಮವಾಗಿರಲಿ ಎನ್ನುವ ಶುಭ ಹಾರೈಕೆ ನಮ್ಮದು.

ವೆಬ್ದುನಿಯಾವನ್ನು ಓದಿ