ಸುಂಟರಗಾಳಿ ನಿರ್ಮಾಪಕನ ಕೊಲೆ ಯತ್ನ

ಶುಕ್ರವಾರ, 13 ನವೆಂಬರ್ 2015 (12:45 IST)
ಕನ್ನಡ ಸಿನಿಮಾ ನಿರ್ಮಾಪಕರೊಬ್ಬರನ್ನು ಹತ್ಯೆ ಮಾಡಲೆತ್ನಿಸಿದ ಘಟನೆ ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ ನಡೆದಿದೆ.

 
ದರ್ಶನ ಅಭಿನಯದ ಸುಂಟರಗಾಳಿ ಸೇರಿದಂತೆ ಹಲವು ಕನ್ನಡ ಚಿತ್ರಗಳನ್ನು ನಿರ್ಮಿಸಿರುವ ಕಡೂರು ಉಮೇಶ್ ಅವರೇ ಹಲ್ಲೆಗೊಳಗಾದ ನಿರ್ಮಾಪಕರಾಗಿದ್ದು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಕೊಲೆ ಯತ್ನ ನಡೆದಿದೆ ಎನ್ನಲಾಗುತ್ತಿದೆ.
 
ನಿನ್ನೆ ರಾತ್ರಿ ಮನೆಯಲ್ಲಿ ಉಮೇಶ್ ತಮ್ಮ ನಿವಾಸದಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಒಳ ನುಗ್ಗಿದ ಐದು ಜನರಿದ್ದ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. 
 
ಮಾರಣಾಂತಿಕವಾಗಿ ಗಾಯಗೊಂಡ ಉಮೇಶ್ ಅವರನ್ನು ಕುಟುಂಬದವರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 
ಅಳಿಯ ಮಹೇಶ್‍ ಈ ಕೃತ್ಯದ ರೂವಾರಿ ನಡೆದಿದೆ ಎಂದು ಉಮೇಶ್ ಕುಟುಂಬಸ್ಥರು ದೂರಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ವೆಬ್ದುನಿಯಾವನ್ನು ಓದಿ