ಅವಂತಿಕಾ ಶೆಟ್ಟಿಗೆ ಒಲಿದ ರಾಜರಥದ ಅದೃಷ್ಟ

ಬುಧವಾರ, 13 ಜುಲೈ 2016 (09:37 IST)
ರಂಗಿತರಂಗ ಸಿನಿಮಾ ತಂಡ ಬಹುದಿನಗಳಿಂದ ಅಭಿಮಾನಿಗಳಿಗೆ ಕಾದಿರಿಸಿದ್ದ ಕುತೂಹಲಕ್ಕೆ ಮೊನ್ನೆ ತಾವೇ ತೆರೆ ಎಳೆದಿದೆ. ತಮ್ಮ ಮುಂದಿನ ಸಿನಿಮಾ ರಾಜರಥ ಅನ್ನೋದನ್ನು ಮೊನ್ನೆ ತಾನೇ ನಿರ್ದೇಶಕ ಅನೂಪ್ ಭಂಡಾರಿ ಅವರು ರಿವೀಲ್ ಮಾಡಿದ್ರು. ಇದ್ರ ಜೊತೆಗೆ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ.

ಹೌದು... ರಂಗಿತರಂಗ ಸಿನಿಮಾದಲ್ಲಿ ತನ್ನದಲ್ಲ ತಪ್ಪಿಗೆ ನಾಯಕನ ಪ್ರೀತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುದ್ದು ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅವಂತಿಕಾ ಶೆಟ್ಟಿ ಅವರನ್ನು ಮತ್ತೆ ಯಾವ ಸಿನಿಮಾದಲ್ಲಿ ನೋಡುತ್ತೇವೆ ಅಂತಾ ಅಭಿಮಾನಿಗಳನ್ನು ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೂ ಒಂದು ಅರ್ಥ ನೀಡಿದ್ದಾರೆ ಅನೂಪ್. ತಮ್ಮ ಮುಂದಿನ ಸಿನಿಮಾದಲ್ಲೂ ಅವಂತಿಕಾ ಶೆಟ್ಟಿ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.ಇನ್ನು ನಿರೂಪ್ ಅವರು ತಮ್ಮ ಮುಂದಿನ ಸಿನಿಮಾದಲ್ಲೂ ನಾಯಕನಾಗಿ ಇರುತ್ತಾರೆ ಅಂತಾ ಅನೂಪ್ ಈ ಹಿಂದೆಯೇ ಹೇಳಿದ್ದರು.
 
ರಂಗಿತರಂಗದ ಬಳಿಕ ಅವಂತಿಕಾ ಅವರಿಗೆ ಕನ್ನಡದಲ್ಲಿ ಉತ್ತಮ ಅವಕಾಶಗಳು ಸಿಕ್ಕಿವೆ.ಇದೇ ವಾರ ಅವಂತಿಕಾ ಶೆಟ್ಟಿ ಹಾಗೂ ಉಪೇಂದ್ರ ಅಭಿನಯದ `ಕಲ್ಪನಾ 2' ಚಿತ್ರ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಗುರುನಂದನ್ ಅಭಿನಯದ ಹೆಸರಿಡದ ಚಿತ್ರದಲ್ಲೂ ಆವಂತಿಕಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. 
 
ಆ ಚಿತ್ರದ ಚಿತ್ರೀಕರಣ ಈಗಷ್ಟೇ ಶುರುವಾಗಿದೆ. ಅಷ್ಟರಲ್ಲೇ `ರಾಜರಥ` ಏರುವುದಕ್ಕೆ ಆವಂತಿಕಾ ಸಜ್ಜಾಗಿದ್ದಾರೆ. ಜುಲೈ 12 ಚಿತ್ರದ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ