ಹಿಂದಿ ಚಿತ್ರಗಳಲ್ಲಿ ಸಿಕ್ಕ ಅವಕಾಶಗಳನ್ನು ಕೈ ಬಿಡುತ್ತಿರುವ ಕಾಜಲ್ ..ಯಾಕೆಮಾ ನೀ ಹೀಗೆ?

ಗುರುವಾರ, 16 ಅಕ್ಟೋಬರ್ 2014 (12:00 IST)
ಕಾಜಲ್ ಅಗರವಾಲ್ ದಕ್ಷಿಣ ಭಾರತದಲ್ಲಿ ಅದರಲ್ಲೂ ತೆಲುಗು ಇಂಡಸ್ಟ್ರಿಯಲ್ಲಿ ಗೆದ್ದರು ಆ ಬಳಿಕ ಕಾರಣಾಂತರಗಳಿಂದ ಹೆಚ್ಚು ಗಮನ ನೀಡಿದ್ದು ಕಾಲಿವುಡ್ ಮತ್ತು ಬಾಲಿವುಡ್ ಕಡೆಗೆ. ಆಕೆಯ ನಟನೆಯ ಚಿತ್ರಗಳಲ್ಲಿ ಈಗ ರಾಮ್ ಚರಣ್ ಜೊತೆಯ  ಗೋವಿಂದುಡು ಅಂದರಿವಾಡಿಲೋ  ಚಿತ್ರ ತುಂಬಾ ಹಣ ಗಳಿಸುತ್ತಿದೆ. 
 
ಯಾಕೆ ಇತ್ತೀಚೆಗೆ ಹೆಚ್ಚಾಗಿ ಕಾಲಿವುಡ್ ಮತ್ತು ಹಿಂದಿ ಚಿತ್ರಗಳ ಕಥೆಯನ್ನು ಕೇಳಿ ಓಕೆ ಮಾಡುತ್ತಿದ್ದಾಳೆ. ಅದರಲ್ಲಿ ಸುಧೀರ್ ಶರ್ಮ  ಅವರ ನಿರ್ದೇಶನ ಚಿತ್ರವೂ ಸಹಿತ ಒಂದಾಗಿತ್ತು. ಆದರೆ ಇತ್ತೀಚಿನ ಸುದ್ದಿ ಪ್ರಕಾರ ಆಕೆ ಆ ಚಿತ್ರದಲ್ಲಿ ನಟಿಸುತ್ತಿಲ್ಲ. ಅದರಲ್ಲಿ ಸುಧೀರ್ ಶರ್ಮ ಅವರ ಮೊಟ್ಟಮೊದಲ ಚಿತ್ರ ಎ ಸಾಲಿ ಜಿಂದಗಿ ಬ್ಯಾಕ್ ನಾಯಕಿ ಆಗಿರುವ ಅದಿತಿ ರಾವ್ ಈಗ ಈ ಹೊಸ ಚಿತ್ರದಲ್ಲಿ ಸಹಿತ ನಟಿಸುತ್ತಿರುವ ಸುದ್ದಿ ಹೊರ ಬಂದಿದೆ. ಇದನ್ನು ಅದಿತಿ ಹೇಳಿದ್ದಾಳೆ. 
 
ಆದರೆ ಕಾಜಲ್ ಸಿಕ್ಕ ಅವಕಾಶ ಬಿಟ್ಟಿದ್ಯಾಕೆ ಎನ್ನುವ ಸುದ್ದಿಗೆ ಸಿಕ್ಕ ಉತ್ತರ ಈಗ ಆಕೆ ಪೂರಿ ಜಗನ್ನಾಥ್ ಅವರ ನಿರ್ದೇಶನದ ಜೂನಿಯರ್ ಎನ್ಟಿಆರ್ ಅವರ ಚಿತ್ರದಲ್ಲಿ ಬ್ಯುಸಿಯಂತೆ. ಸೊ ಆ ಕಾರಣದಿಂದ ಆಕೆ ಆ ಚಿತ್ರದಲ್ಲಿ ನಟಿಸುತ್ತಿಲ್ಲ.ಈ ಬಗ್ಗೆ ಸುಧೀರ್‌ಗೆ ಹೇಳಿದ್ದಾಳಂತೆ. ಸುಧೀರ್ ಮತ್ತು ಕಾಜಲ್ ಒಳ್ಳೆಯ ಸ್ನೇಹಿತರಾದ್ದರಿಂದ ಆತನ ಕಡೆಯಿಂದ ಯಾವುದೇ ತೊಂದರೆ ಆಗಿಲ್ಲ. ಅದಿತಿಗೆ ಚಾನ್ಸ್ ಸಿಕ್ಕಿದೆ. 
 

ವೆಬ್ದುನಿಯಾವನ್ನು ಓದಿ