ಕಪಾಲಿ ಎದುರು ಬೈಕ್‌ನಲ್ಲಿ ಹರಿಪ್ರಿಯಾ ಜೊತೆ ಕಾಣಿಸಿಕೊಂಡ 'ಬುಲೆಟ್ ಬಸ್ಯಾ' ?

ಶುಕ್ರವಾರ, 24 ಜುಲೈ 2015 (12:46 IST)
ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯ ನಟ ಶರಣ್ ಅಭಿನಯದ 'ಬುಲೆಟ್ ಬಸ್ಯಾ' ಚಿತ್ರ ಇಂದು ತೆರೆಕಂಡಿರುವ ಹಿನ್ನೆಲೆಯಲ್ಲಿ ನಟ ಶರಣ್ ಹಾಗೂ ನಟಿ ಹರಿಪ್ರಿಯಾ ಇಬ್ಬರೂ ಜೊತೆಗೂಡಿ ಬಲೆಟ್ ನಲ್ಲಿ ಕಪಾಲಿ ಚಿತ್ರ ಮಂದಿರಕ್ಕೆ ತರಳಿ ಚಿತ್ರ ವೀಕ್ಷಿಸಿದರು. 
ಜಯತೀರ್ಥ ನಿರ್ದೇಶನದ ಚಿತ್ರ ಇದಾಗಿದ್ದು, ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಹಾಗೂ ನಾಯಕಿ ಚಿತ್ರ ಯಶಸ್ಸು ಕಾಣಲೆಂದು ನಗರದ ಆನಂದ್ ರಾವ್ ಸರ್ಕಲ್‌ನಲ್ಲಿರುವ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಇಬ್ಬರೂ ಕೂಡ ಬುಲೆಟ್ ಏರಿ ನಗರದ ಕಪಾಲಿ ಚಿತ್ರ ಮಂದಿರದ ವರೆಗೆ ಪ್ರಯಾಣ ಬೆಳೆಸಿ ಚಿತ್ರ ವೀಕ್ಷಿಸಿದರು.
 
ಈ ಚಿತ್ರಕ್ಕೆ ಜಯ್ಯಣ್ಣ ಹಾಗೂ ಭೋಗೇಂದ್ರ ಎಂಬ ಇಬ್ಬರು ನಿರ್ಮಾಪಕರು ಹಣ ಹೂಡಿದ್ದಾರೆ. ನಟ ಶರಣ್ ಹಾಗೂ ಜಯತೀರ್ಥ ಚಿತ್ರಕಥೆ ಬರೆದಿದ್ದು, ಜಯತೀರ್ಥ ನಿರ್ದೇಶಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಪ್ರಮುಖವಾಗಿ ಶರಣ್ ನಾಯಕ ನಟರಾಗಿ ಕೊಣಿಸಿಕೊಂಡಿದ್ದರೆ, ನಾಯಕಿಯಾಗಿ ಹರಿಪ್ರಿಯ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಯತಿರಾಜ್ ಜಗ್ಗೇಶ್ ಸೇರಿದಂತೆ ಇತರರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಸುಗ್ನಾನ್ ಅವರ ಉತ್ತಮ ಛಾಯಾಗ್ರಹಣ ಚಿತ್ರಕ್ಕಿದೆ. 
 
ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ. ಜಯ್ಯಣ್ಣ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ಸೊಗಸಾಗಿ ಮೂಡಿ ಬಂದಿದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ