ನಿಮಿಷಾಂಬ ಚಂದ್ರಶೇಖರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರ ಮೇಲೆ ನವಶಕ್ತಿ ನಿರ್ಮಾಣ ಮಾಡಿದ್ದ ಸಿ ನಾಗರಾಜ್ ಅವರು ಕೇಸ್ ಫೈಲ್ ಮಾಡಿದ್ದಾರೆ. ಅದಕ್ಕೆ ಮುಖ್ಯಕಾರಣ ಚಂದ್ರಶೇಖರ್ ಅವರು ನಟರಾಜ್ ಬಳಿ ಹಣ ಸಾಲವಾಗಿ ಪಡೆದಿದ್ದರಂತೆ. ಅದನ್ನು ವಾಪಸು ಮಾಡುವ ತನಕ ಚಿತ್ರವನ್ನು ಬಿಡುಗಡೆ ಮಾಡಬಾರದೆನ್ನುವ ಅಂಶ (case no. 3675/15) ಮುಂದಿಟ್ಟು ಈ ಕೇಸ್ ಹಾಕಿದ್ದಾರೆ ಎನ್ನುವ ಮಾಹಿತಿ ಹೊರ ಬಂದಿದೆ.