ಈ ಸಿನಿಮಾ ಕೋಲಾರದ ಕೆಜಿಎಫ್ ನ ರೌಡಿ ತಂಗನ ಕುರಿತಾದ ಸಿನಿಮಾವಂತೆ. ತಮಿಳು ಹಿನ್ನೆಲೆಯುಳ್ಳ ಈ ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವಿದೆ. ಇನ್ನು ಸಿನಿಮಾದಲ್ಲಿ ತಮಿಳು ಹಿನ್ನೆಲೆಯವರೇ ಹಾಡಿದ್ರೆ ಉತ್ತಮ ಅನ್ನೋ ಕಾರಣಕ್ಕೆ ಸಿನಿಮಾದಲ್ಲಿ ಗಾನ ಬಾಲ ಅವರಿಂದ ಹಾಡಿಸಲಾಗಿದೆಯಂತೆ. ಈಗಗಾಲೇ ಈ ಸಿನಿಮಾ ನಾನಾ ಕಾರಣಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಅತೀ ಶೀಘ್ರದಲ್ಲಿ ಪ್ರೇಕ್ಷಕರೆದುರಿಗೆ ಬರಲಿದೆ.