ಚಿನ್ನಾರಿ ಮುತ್ತನ ಅದೃಷ್ಟದ ವರ್ಷವಾಗಲಿದೆಯೇ 2015 ?

ಸೋಮವಾರ, 13 ಏಪ್ರಿಲ್ 2015 (11:15 IST)
ಕನ್ನಡ ಬಿಗ್ ಬಾಸ್ ಮೊದಲ ಅವತರಣಿಕೆಯಲ್ಲಿ ಯಶಸ್ವಿಯಾದ ನಟ ವಿಜಯ್ ರಾಘವೇಂದ್ರ. ಕನ್ನಡ ಚಿತ್ರಪ್ರೇಮಿಗಳು ಅತ್ಯಂತ ಪ್ರೀತಿಯಿಂದ ಚಿನ್ನಾರಿ ಮುತ್ತ ಎಂದು ಕರೆಯುವುದರಿಂದ ಅವರು ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಎಂದೇ ಈಗ ತಮ್ಮ ಹೆಸರನ್ನು ಮರುನಾಮಕರಣ ಮಾಡಿಕೊಂಡಿದ್ದಾರೆ. 2015 ರಲ್ಲಿ ಈಗ ಈ ನಟ ಅತ್ಯುತ್ತಮ ರೀತಿಯಲ್ಲಿ ವಿಶೇಷವಾಗಿ ತಮ್ಮ ಭವಿಷ್ಯ ಉಜ್ವಲ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ.


 
ಈ ನಟ ಬಾಲನಟರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ವಿಶಿಷ್ಟವಾದ ಕಂಠಸಿರಿಯನ್ನು ಪಡೆದಿರುವ ವಿಜಯ್ ರಾಘವೇಂದ್ರ ಅವರು ಚಿನ್ನಾರಿ ಮುತ್ತ ಮತ್ತು ಕೊಟ್ರೇಶಿ ಕನಸು ಚಿತ್ರದಲ್ಲಿ ನಟಿಸಿದ್ದಾರೆ. ಹೇಗಿದ್ದ ಹೇಗಾದ ಗೊತ್ತ ನಮ್ಮ ಚಿನ್ನಾರಿ ಮುತ್ತ ಹಾಡು ಇಂದಿಗೂ ಮರೆಯದಂತಹ ಗೀತೆಯಾಗಿದೆ. ಆ ಬಳಿಕ ಅವರು 'ನಿನಗಾಗಿ' ಎನ್ನುವ ಚಿತ್ರದ ಮೂಲಕ ರಾಧಿಕ ಕುಮಾರ ಸ್ವಾಮಿ ಅವರ ಜೊತೆ  ಹೀರೋ ಆಗಿ ಎಂಟ್ರಿ ಆದರು.
 
ಆ ಬಳಿಕ ಅನೇಕ ಚಿತ್ರಗಳಲ್ಲಿ ನಟಿಸಿದ ಈ ಪ್ರತಿಭಾವಂತ ನಟ ಗೆದ್ದಿದ್ದು  ಬಹಳ ಕಡಿಮೆ. ಈಗ ಅವರ ಕಾಲ ಚೆನ್ನಾಗಿದೆ  ಎಂದೇ ಹೇಳಬಹುದು. ಕೈತುಂಬಾ ಅವಕಾಶಗಳನ್ನು ಪಡೆದಿರುವ ವಿಜಯ್ ರಾಘವೇಂದ್ರ ಅವರ  ಅನೇಕ  ಚಿತ್ರಗಳು ಈ ವರ್ಷ ಬಿಡುಗಡೆ ಆಗಲಿದೆ. ಒಟ್ಟಾರೆ ಈ ವರ್ಷ ಅವರ ತಾರ ಬದುಕನ್ನು ಅದೃಷ್ಟದೇವಿ ಉಜ್ವಲ ಮಾಡಲೆಂಬುದೆ ನಮ್ಮ ಹಾರೈಕೆ.  

ವೆಬ್ದುನಿಯಾವನ್ನು ಓದಿ